
ವನದಲ್ಲಿ ಪಾಂಡವರು
"ಶ್ರೀಮನ್ಮಹಾಭಾರತದ ಕಾದಂಬರೀಕರಣ ಮಾಲಿಕೆಯಲ್ಲಿ ಈಗಣ 'ವನದಲ್ಲಿ ಪಾಂಡವರು' ಎಂಬುದು ನಾಲ್ಕನೆಯ ಕೃತಿ. ಈ ಮುಂಚಿನ ಮೂರು — 'ಆ ಹದಿನೆಂಟು ದಿನಗಳು', 'ರಾಜಸೂಯದ ರಾಜಕೀಯ' ಮತ್ತು 'ರಾಜಸೂಯ ತಂದ ಅನರ್ಥ' ಎಂಬುವು ಈಗಾಗಲೇ ಓದುಗರ ಕೈಸೇರಿ ಬಹಳ ದಿನಗಳಾಗಿವೆ. ಈಗಣ ಸಂಪುಟವು 'ವನಪರ್ವದ' ಪೂರ್ವಾರ್ಧ ಭಾಗದ ಕಥೆಯನ್ನಾಧರಿಸಿದ್ದು, ಇದರ ಶೈಲಿ ಬೇರೆಯಾಗಿರಬೇಕಾದ ಅನಿವಾರ್ಯತೆಯನ್ನು ಮೂಲಗ್ರಂಥ ವಿಧಿಸಿದೆ. 'ಅಷ್ಟಾವಕ್ರಗೀತೆ', 'ಸಾವಿತ್ರಿ ಚರಿತ್ರೆ', 'ನಳ ಚರಿತ್ರೆ', 'ನಹುಷೋಪಾಖ್ಯಾನ' ಮುಂತಾದವು ತಾತ್ವಿಕ ಚಿಂತನೆ, ನಿರೂಪಣೆಗಳನ್ನೊಳಗೊಂಡು, ಕಲಾಕಾರನ ಕಲ್ಪನಾ ವಿಲಾಸಕ್ಕೆ ಕಡಿವಾಣವನ್ನು ಹಾಕುತ್ತವೆ. ತೀರ್ಥಯಾತ್ರಾ ಪ್ರಸಂಗದ ಪಾಂಡವರ ಸಂಚಾರ ಕಾಲದಲ್ಲಿ ಋಷಿ-ಮುನಿಗಳ ಸಹವಾಸ, ತತ್ ಶ್ರವಣ, ಬೋಧೆ ಇವು ಶ್ರೀಮಹಾಭಾರತದ ತಾತ್ವಿಕ ಭಾಗಗಳಾಗಿ, ಕಥೆಗಿಂತ ಇಲ್ಲಿ ಬೇರೆ ಅಭಿರುಚಿಯನ್ನೇ ಓದುಗ ಬೆಳೆಸಿಕೊಳ್ಳಬೇಕು; ಬೆಳೆಯಬೇಕು. ಪ್ರತಿ ಪರ್ವದಲ್ಲೂ ಕಬ್ಬಿನ ಗಿಣ್ಣಿನಲ್ಲಿನಂತೆ ರಸೋದಯದ ರೀತಿ ಬೇರೆಯೇ ಇರುವುದನ್ನು ಹಿರಿಯರು ಎಂದೋ ಮೂಲದಲ್ಲಿ ಗುರುತಿಸಿಯೇ ಇದ್ದಾರೆ. ನಮ್ಮ ಇಂದಿನ ಪೀಳಿಗೆಯ ಭಾರತೀಯರಿಗೆ ಕಥೆಯೂ, ತತ್ವವೂ, ಮಹಾಭಾರತದ ಮೂಲ ಸ್ವರೂಪೋದ್ದೇಶಗಳೂ ಎಷ್ಟು ಅರಿವಿಗೂ ಗೌರವಕ್ಕೂ ಬಾರದಂತೆ 64 ವರ್ಷಗಳ ನಮ್ಮ ಆಳುಗರು ನಮ್ಮನ್ನು 'ಸಾಂಸ್ಕೃತಿಕ ಪರಕೀಯತೆಯ ಕೂಪದಲ್ಲಿ' ತಳ್ಳಿದ್ದಾರೆ."
- ಕೆ. ಎಸ್. ನಾರಾಯಣಾಚಾರ್ಯ (ಅರಿಕೆಯಿಂದ)
"ಶ್ರೀಮನ್ಮಹಾಭಾರತದ ಕಾದಂಬರೀಕರಣ ಮಾಲಿಕೆಯಲ್ಲಿ ಈಗಣ 'ವನದಲ್ಲಿ ಪಾಂಡವರು' ಎಂಬುದು ನಾಲ್ಕನೆಯ ಕೃತಿ. ಈ ಮುಂಚಿನ ಮೂರು — 'ಆ ಹದಿನೆಂಟು ದಿನಗಳು', 'ರಾಜಸೂಯದ ರಾಜಕೀಯ' ಮತ್ತು 'ರಾಜಸೂಯ ತಂದ ಅನರ್ಥ' ಎಂಬುವು ಈಗಾಗಲೇ ಓದುಗರ ಕೈಸೇರಿ ಬಹಳ ದಿನಗಳಾಗಿವೆ. ಈಗಣ ಸಂಪುಟವು 'ವನಪರ್ವದ' ಪೂರ್ವಾರ್ಧ ಭಾಗದ ಕಥೆಯನ್ನಾಧರಿಸಿದ್ದು, ಇದರ ಶೈಲಿ ಬೇರೆಯಾಗಿರಬೇಕಾದ ಅನಿವಾರ್ಯತೆಯನ್ನು ಮೂಲಗ್ರಂಥ ವಿಧಿಸಿದೆ. 'ಅಷ್ಟಾವಕ್ರಗೀತೆ', 'ಸಾವಿತ್ರಿ ಚರಿತ್ರೆ', 'ನಳ ಚರಿತ್ರೆ', 'ನಹುಷೋಪಾಖ್ಯಾನ' ಮುಂತಾದವು ತಾತ್ವಿಕ ಚಿಂತನೆ, ನಿರೂಪಣೆಗಳನ್ನೊಳಗೊಂಡು, ಕಲಾಕಾರನ ಕಲ್ಪನಾ ವಿಲಾಸಕ್ಕೆ ಕಡಿವಾಣವನ್ನು ಹಾಕುತ್ತವೆ. ತೀರ್ಥಯಾತ್ರಾ ಪ್ರಸಂಗದ ಪಾಂಡವರ ಸಂಚಾರ ಕಾಲದಲ್ಲಿ ಋಷಿ-ಮುನಿಗಳ ಸಹವಾಸ, ತತ್ ಶ್ರವಣ, ಬೋಧೆ ಇವು ಶ್ರೀಮಹಾಭಾರತದ ತಾತ್ವಿಕ ಭಾಗಗಳಾಗಿ, ಕಥೆಗಿಂತ ಇಲ್ಲಿ ಬೇರೆ ಅಭಿರುಚಿಯನ್ನೇ ಓದುಗ ಬೆಳೆಸಿಕೊಳ್ಳಬೇಕು; ಬೆಳೆಯಬೇಕು. ಪ್ರತಿ ಪರ್ವದಲ್ಲೂ ಕಬ್ಬಿನ ಗಿಣ್ಣಿನಲ್ಲಿನಂತೆ ರಸೋದಯದ ರೀತಿ ಬೇರೆಯೇ ಇರುವುದನ್ನು ಹಿರಿಯರು ಎಂದೋ ಮೂಲದಲ್ಲಿ ಗುರುತಿಸಿಯೇ ಇದ್ದಾರೆ. ನಮ್ಮ ಇಂದಿನ ಪೀಳಿಗೆಯ ಭಾರತೀಯರಿಗೆ ಕಥೆಯೂ, ತತ್ವವೂ, ಮಹಾಭಾರತದ ಮೂಲ ಸ್ವರೂಪೋದ್ದೇಶಗಳೂ ಎಷ್ಟು ಅರಿವಿಗೂ ಗೌರವಕ್ಕೂ ಬಾರದಂತೆ 64 ವರ್ಷಗಳ ನಮ್ಮ ಆಳುಗರು ನಮ್ಮನ್ನು 'ಸಾಂಸ್ಕೃತಿಕ ಪರಕೀಯತೆಯ ಕೂಪದಲ್ಲಿ' ತಳ್ಳಿದ್ದಾರೆ."
- ಕೆ. ಎಸ್. ನಾರಾಯಣಾಚಾರ್ಯ (ಅರಿಕೆಯಿಂದ)
Original: $4.86
-70%$4.86
$1.46Description
"ಶ್ರೀಮನ್ಮಹಾಭಾರತದ ಕಾದಂಬರೀಕರಣ ಮಾಲಿಕೆಯಲ್ಲಿ ಈಗಣ 'ವನದಲ್ಲಿ ಪಾಂಡವರು' ಎಂಬುದು ನಾಲ್ಕನೆಯ ಕೃತಿ. ಈ ಮುಂಚಿನ ಮೂರು — 'ಆ ಹದಿನೆಂಟು ದಿನಗಳು', 'ರಾಜಸೂಯದ ರಾಜಕೀಯ' ಮತ್ತು 'ರಾಜಸೂಯ ತಂದ ಅನರ್ಥ' ಎಂಬುವು ಈಗಾಗಲೇ ಓದುಗರ ಕೈಸೇರಿ ಬಹಳ ದಿನಗಳಾಗಿವೆ. ಈಗಣ ಸಂಪುಟವು 'ವನಪರ್ವದ' ಪೂರ್ವಾರ್ಧ ಭಾಗದ ಕಥೆಯನ್ನಾಧರಿಸಿದ್ದು, ಇದರ ಶೈಲಿ ಬೇರೆಯಾಗಿರಬೇಕಾದ ಅನಿವಾರ್ಯತೆಯನ್ನು ಮೂಲಗ್ರಂಥ ವಿಧಿಸಿದೆ. 'ಅಷ್ಟಾವಕ್ರಗೀತೆ', 'ಸಾವಿತ್ರಿ ಚರಿತ್ರೆ', 'ನಳ ಚರಿತ್ರೆ', 'ನಹುಷೋಪಾಖ್ಯಾನ' ಮುಂತಾದವು ತಾತ್ವಿಕ ಚಿಂತನೆ, ನಿರೂಪಣೆಗಳನ್ನೊಳಗೊಂಡು, ಕಲಾಕಾರನ ಕಲ್ಪನಾ ವಿಲಾಸಕ್ಕೆ ಕಡಿವಾಣವನ್ನು ಹಾಕುತ್ತವೆ. ತೀರ್ಥಯಾತ್ರಾ ಪ್ರಸಂಗದ ಪಾಂಡವರ ಸಂಚಾರ ಕಾಲದಲ್ಲಿ ಋಷಿ-ಮುನಿಗಳ ಸಹವಾಸ, ತತ್ ಶ್ರವಣ, ಬೋಧೆ ಇವು ಶ್ರೀಮಹಾಭಾರತದ ತಾತ್ವಿಕ ಭಾಗಗಳಾಗಿ, ಕಥೆಗಿಂತ ಇಲ್ಲಿ ಬೇರೆ ಅಭಿರುಚಿಯನ್ನೇ ಓದುಗ ಬೆಳೆಸಿಕೊಳ್ಳಬೇಕು; ಬೆಳೆಯಬೇಕು. ಪ್ರತಿ ಪರ್ವದಲ್ಲೂ ಕಬ್ಬಿನ ಗಿಣ್ಣಿನಲ್ಲಿನಂತೆ ರಸೋದಯದ ರೀತಿ ಬೇರೆಯೇ ಇರುವುದನ್ನು ಹಿರಿಯರು ಎಂದೋ ಮೂಲದಲ್ಲಿ ಗುರುತಿಸಿಯೇ ಇದ್ದಾರೆ. ನಮ್ಮ ಇಂದಿನ ಪೀಳಿಗೆಯ ಭಾರತೀಯರಿಗೆ ಕಥೆಯೂ, ತತ್ವವೂ, ಮಹಾಭಾರತದ ಮೂಲ ಸ್ವರೂಪೋದ್ದೇಶಗಳೂ ಎಷ್ಟು ಅರಿವಿಗೂ ಗೌರವಕ್ಕೂ ಬಾರದಂತೆ 64 ವರ್ಷಗಳ ನಮ್ಮ ಆಳುಗರು ನಮ್ಮನ್ನು 'ಸಾಂಸ್ಕೃತಿಕ ಪರಕೀಯತೆಯ ಕೂಪದಲ್ಲಿ' ತಳ್ಳಿದ್ದಾರೆ."
- ಕೆ. ಎಸ್. ನಾರಾಯಣಾಚಾರ್ಯ (ಅರಿಕೆಯಿಂದ)












