
ವೈಜ್ಞಾನಿಕ ಮನೋಧರ್ಮ
ಪ್ರತಿಯೊಂದು ಘಟನೆಯ ಹಿನ್ನೆಲೆಯಲ್ಲಿಯೂ ಒಂದು ಪ್ರೇರಣೆ ಇದ್ದೇ ಇರುವುದೆಂಬ ಸಂಗತಿ ನಮ್ಮ ದೈನಂದಿನ ಅನುಭವಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಸ್ಪಷ್ಟವಾಗುತ್ತದೆ. ಉದಾಹರಣೆಗೆ, ಘರ್ಷಣೆ ಇಲ್ಲದೆ ಶಾಖೋತ್ಪನ್ನವಾಗದು. ವಿಜ್ಞಾನದ ಪರಿಭಾಷೆಯಲ್ಲಿ ಘಟನೆಯನ್ನು 'ಕಾರ್ಯ' ಎಂದೂ ಪ್ರೇರಣೆಯನ್ನು 'ಕಾರಣ' ಎಂದೂ ಹೇಳುತ್ತೇವೆ. 'ಕಾರ್ಯ' ನಮ್ಮ ಅರಿವಿಗೆ ಬರುತ್ತದೆ. 'ಕಾರಣ'ವನ್ನು ನಾವು ಶೋಧಿಸಬೇಕಾಗುತ್ತದೆ. ತೊಟ್ಟು ಕಳಚಿದ ಸೇಬು ಆ ಮರದಿಂದ ಕೆಳಕ್ಕೆ ಬೀಳುವುದು 'ಕಾರ್ಯ'. ಇದರ 'ಕಾರಣ' ಏನೆಂಬುದು ನ್ಯೂಟನ್ ರಂಗ ಪ್ರವೇಶಿಸಿ ಗುರುತ್ವಾಕರ್ಷಣ ಬಲವನ್ನು ಆವಿಷ್ಕರಿಸುವ ತನಕ ತಿಳಿದಿರಲಿಲ್ಲ.
ವಿಜ್ಞಾನದ ಅನ್ವೇಷಣ ಪಥವನ್ನು ರೂಪಿಸುವ ತತ್ವಗಳು ಮುಖ್ಯವಾಗಿ ಮೂರು: ವಿಶ್ವದ ಸಮಸ್ತ ವಿದ್ಯಮಾನಗಳಲ್ಲಿಯೂ 'ಕ್ರಮ'ವಿದೆ; ಈ 'ಕ್ರಮ'ವನ್ನು ಗುರುತಿಸಿ ಅರ್ಥವಿಸಿ ವ್ಯಾಖ್ಯಾನಿಸುವ ಸಾಮರ್ಥ್ಯ ಮಾನವ ಮತಿಗಿದೆ; ವಿಶ್ವದ ತಳದಲ್ಲಿ ಕ್ರಿಯಾಶೀಲವಾಗಿರುವ ನಿಯಮಗಳು ಮಾನವನ ಜೊತೆ ಎಂದೂ ಪಕ್ಷಪಾತ ನೀತಿಯನ್ನಾಗಲೀ ಕಪಟ ವರ್ತನೆಯನ್ನಾಗಲೀ ಪ್ರದರ್ಶಿಸುವುದಿಲ್ಲ.
ಜ್ಞಾನಾನ್ವೇಷಣೆಯ ಹಾಗೂ ಅನ್ವಯದ ಈ ಋಜುಮಾರ್ಗದಲ್ಲಿ ನಾವು ನಿಷ್ಠೆಯಿಂದ ಸಾಗುತ್ತಿರುವಾಗ ನಮ್ಮ ಮನಸ್ಸು ತಳೆಯುವ ಪಕ್ವ ಸ್ಥಿತಿಗೆ ವೈಜ್ಞಾನಿಕ ಮನೋಧರ್ಮ ಎಂದು ಹೆಸರು. ಸ್ವತಂತ್ರ ಚಿಂತನಶೀಲ ವ್ಯಕ್ತಿ ಪ್ರತಿಯೊಬ್ಬನೂ ಇದನ್ನು ಗಳಿಸಿ ಬದುಕನ್ನು ಹಸನುಗೊಳಿಸಿಕೊಳ್ಳುವುದು ಸಾಧ್ಯವಿದೆ.
ಈ ಕೃತಿಯ ಲೇಖಕರಾದ ಶ್ರೀ ಜಿ. ಟಿ. ನಾರಾಯಣ
ಪ್ರತಿಯೊಂದು ಘಟನೆಯ ಹಿನ್ನೆಲೆಯಲ್ಲಿಯೂ ಒಂದು ಪ್ರೇರಣೆ ಇದ್ದೇ ಇರುವುದೆಂಬ ಸಂಗತಿ ನಮ್ಮ ದೈನಂದಿನ ಅನುಭವಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಸ್ಪಷ್ಟವಾಗುತ್ತದೆ. ಉದಾಹರಣೆಗೆ, ಘರ್ಷಣೆ ಇಲ್ಲದೆ ಶಾಖೋತ್ಪನ್ನವಾಗದು. ವಿಜ್ಞಾನದ ಪರಿಭಾಷೆಯಲ್ಲಿ ಘಟನೆಯನ್ನು 'ಕಾರ್ಯ' ಎಂದೂ ಪ್ರೇರಣೆಯನ್ನು 'ಕಾರಣ' ಎಂದೂ ಹೇಳುತ್ತೇವೆ. 'ಕಾರ್ಯ' ನಮ್ಮ ಅರಿವಿಗೆ ಬರುತ್ತದೆ. 'ಕಾರಣ'ವನ್ನು ನಾವು ಶೋಧಿಸಬೇಕಾಗುತ್ತದೆ. ತೊಟ್ಟು ಕಳಚಿದ ಸೇಬು ಆ ಮರದಿಂದ ಕೆಳಕ್ಕೆ ಬೀಳುವುದು 'ಕಾರ್ಯ'. ಇದರ 'ಕಾರಣ' ಏನೆಂಬುದು ನ್ಯೂಟನ್ ರಂಗ ಪ್ರವೇಶಿಸಿ ಗುರುತ್ವಾಕರ್ಷಣ ಬಲವನ್ನು ಆವಿಷ್ಕರಿಸುವ ತನಕ ತಿಳಿದಿರಲಿಲ್ಲ.
ವಿಜ್ಞಾನದ ಅನ್ವೇಷಣ ಪಥವನ್ನು ರೂಪಿಸುವ ತತ್ವಗಳು ಮುಖ್ಯವಾಗಿ ಮೂರು: ವಿಶ್ವದ ಸಮಸ್ತ ವಿದ್ಯಮಾನಗಳಲ್ಲಿಯೂ 'ಕ್ರಮ'ವಿದೆ; ಈ 'ಕ್ರಮ'ವನ್ನು ಗುರುತಿಸಿ ಅರ್ಥವಿಸಿ ವ್ಯಾಖ್ಯಾನಿಸುವ ಸಾಮರ್ಥ್ಯ ಮಾನವ ಮತಿಗಿದೆ; ವಿಶ್ವದ ತಳದಲ್ಲಿ ಕ್ರಿಯಾಶೀಲವಾಗಿರುವ ನಿಯಮಗಳು ಮಾನವನ ಜೊತೆ ಎಂದೂ ಪಕ್ಷಪಾತ ನೀತಿಯನ್ನಾಗಲೀ ಕಪಟ ವರ್ತನೆಯನ್ನಾಗಲೀ ಪ್ರದರ್ಶಿಸುವುದಿಲ್ಲ.
ಜ್ಞಾನಾನ್ವೇಷಣೆಯ ಹಾಗೂ ಅನ್ವಯದ ಈ ಋಜುಮಾರ್ಗದಲ್ಲಿ ನಾವು ನಿಷ್ಠೆಯಿಂದ ಸಾಗುತ್ತಿರುವಾಗ ನಮ್ಮ ಮನಸ್ಸು ತಳೆಯುವ ಪಕ್ವ ಸ್ಥಿತಿಗೆ ವೈಜ್ಞಾನಿಕ ಮನೋಧರ್ಮ ಎಂದು ಹೆಸರು. ಸ್ವತಂತ್ರ ಚಿಂತನಶೀಲ ವ್ಯಕ್ತಿ ಪ್ರತಿಯೊಬ್ಬನೂ ಇದನ್ನು ಗಳಿಸಿ ಬದುಕನ್ನು ಹಸನುಗೊಳಿಸಿಕೊಳ್ಳುವುದು ಸಾಧ್ಯವಿದೆ.
ಈ ಕೃತಿಯ ಲೇಖಕರಾದ ಶ್ರೀ ಜಿ. ಟಿ. ನಾರಾಯಣ
Description
ಪ್ರತಿಯೊಂದು ಘಟನೆಯ ಹಿನ್ನೆಲೆಯಲ್ಲಿಯೂ ಒಂದು ಪ್ರೇರಣೆ ಇದ್ದೇ ಇರುವುದೆಂಬ ಸಂಗತಿ ನಮ್ಮ ದೈನಂದಿನ ಅನುಭವಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಸ್ಪಷ್ಟವಾಗುತ್ತದೆ. ಉದಾಹರಣೆಗೆ, ಘರ್ಷಣೆ ಇಲ್ಲದೆ ಶಾಖೋತ್ಪನ್ನವಾಗದು. ವಿಜ್ಞಾನದ ಪರಿಭಾಷೆಯಲ್ಲಿ ಘಟನೆಯನ್ನು 'ಕಾರ್ಯ' ಎಂದೂ ಪ್ರೇರಣೆಯನ್ನು 'ಕಾರಣ' ಎಂದೂ ಹೇಳುತ್ತೇವೆ. 'ಕಾರ್ಯ' ನಮ್ಮ ಅರಿವಿಗೆ ಬರುತ್ತದೆ. 'ಕಾರಣ'ವನ್ನು ನಾವು ಶೋಧಿಸಬೇಕಾಗುತ್ತದೆ. ತೊಟ್ಟು ಕಳಚಿದ ಸೇಬು ಆ ಮರದಿಂದ ಕೆಳಕ್ಕೆ ಬೀಳುವುದು 'ಕಾರ್ಯ'. ಇದರ 'ಕಾರಣ' ಏನೆಂಬುದು ನ್ಯೂಟನ್ ರಂಗ ಪ್ರವೇಶಿಸಿ ಗುರುತ್ವಾಕರ್ಷಣ ಬಲವನ್ನು ಆವಿಷ್ಕರಿಸುವ ತನಕ ತಿಳಿದಿರಲಿಲ್ಲ.
ವಿಜ್ಞಾನದ ಅನ್ವೇಷಣ ಪಥವನ್ನು ರೂಪಿಸುವ ತತ್ವಗಳು ಮುಖ್ಯವಾಗಿ ಮೂರು: ವಿಶ್ವದ ಸಮಸ್ತ ವಿದ್ಯಮಾನಗಳಲ್ಲಿಯೂ 'ಕ್ರಮ'ವಿದೆ; ಈ 'ಕ್ರಮ'ವನ್ನು ಗುರುತಿಸಿ ಅರ್ಥವಿಸಿ ವ್ಯಾಖ್ಯಾನಿಸುವ ಸಾಮರ್ಥ್ಯ ಮಾನವ ಮತಿಗಿದೆ; ವಿಶ್ವದ ತಳದಲ್ಲಿ ಕ್ರಿಯಾಶೀಲವಾಗಿರುವ ನಿಯಮಗಳು ಮಾನವನ ಜೊತೆ ಎಂದೂ ಪಕ್ಷಪಾತ ನೀತಿಯನ್ನಾಗಲೀ ಕಪಟ ವರ್ತನೆಯನ್ನಾಗಲೀ ಪ್ರದರ್ಶಿಸುವುದಿಲ್ಲ.
ಜ್ಞಾನಾನ್ವೇಷಣೆಯ ಹಾಗೂ ಅನ್ವಯದ ಈ ಋಜುಮಾರ್ಗದಲ್ಲಿ ನಾವು ನಿಷ್ಠೆಯಿಂದ ಸಾಗುತ್ತಿರುವಾಗ ನಮ್ಮ ಮನಸ್ಸು ತಳೆಯುವ ಪಕ್ವ ಸ್ಥಿತಿಗೆ ವೈಜ್ಞಾನಿಕ ಮನೋಧರ್ಮ ಎಂದು ಹೆಸರು. ಸ್ವತಂತ್ರ ಚಿಂತನಶೀಲ ವ್ಯಕ್ತಿ ಪ್ರತಿಯೊಬ್ಬನೂ ಇದನ್ನು ಗಳಿಸಿ ಬದುಕನ್ನು ಹಸನುಗೊಳಿಸಿಕೊಳ್ಳುವುದು ಸಾಧ್ಯವಿದೆ.
ಈ ಕೃತಿಯ ಲೇಖಕರಾದ ಶ್ರೀ ಜಿ. ಟಿ. ನಾರಾಯಣ












