
ಪುಟ್ಟ ಗೌರಿ ಜೊತೆ ಪುಟ್ಟ ಗಣಪ
ಅರೆ ಮಲೆನಾಡಿನ ಭದ್ರಾವತಿ ನನ್ನ ಊರು. ಸ್ನಾತಕೋತ್ತರ ಪದವಿ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ, ಪುಟಾಣಿಗಳಿಗೆ ಶಿಕ್ಷಕಿಯಾಗಿ ಪಾಠ ಮಾಡುತ್ತಿರುವುದು ಕೂಡ ವಿಜ್ಞಾನವೇ ಆದರೂ, ಸಾಹಿತ್ಯ ನನ್ನ ಆಸಕ್ತಿಯ ಕ್ಷೇತ್ರ ಓದಿನ ಪಯಣ ಶುರುವಾಗಿದ್ದು ಸಾಯಿಸುತೆ, ತ್ರಿವೇಣಿ ಅವರುಗಳ ಪುಸ್ತಕದಿಂದ ಆದರೂ, ತೇಜಸ್ವಿಯವರ ಬರಹಗಳು ತುಂಬಾ ಪ್ರಭಾವಿಸಿವೆ. ಬದುಕಿನ ಎಲ್ಲಾ ಹಂತಗಳಲ್ಲೂ ಪುಸ್ತಕವನ್ನು ಜೊತೆ ಮಾಡಿಕೊಂಡವಳಿಗೆ ಎಲ್ಲೋ ಒಂದು ಕಡೆ ನಾಲ್ಕು ಅಕ್ಷರವನ್ನು ಬರೆಯುವ ಆಸೆ ಕೂಡ ಅವಾಗವಾಗ ಮೂಡುತ್ತಿತ್ತು. ನಾನೇ ಪುಟ್ಟ ಪುಟ್ಟ ಎರಡು ಮಕ್ಕಳ ತಾಯಿಯಾದ ಮೇಲೆ ಅದಕ್ಕೊಂದು ಮೂರ್ತ ರೂಪ ಸಿಕ್ಕಿತು. ಹಾಗೆ ಮೂಡಿಬಂದ ನನ್ನ ಮೂರನೇ ಕೂಸು 'ಪುಟ್ಟ ಗೌರಿ ಜೊತೆ ಪುಟ್ಟ ಗಣಪ", 'ಮನೆಯಲ್ಲಿ ಗಂಡು ಪೋರ, ಕೊಟ್ಟಿಗೆಯಲ್ಲಿ ಹೆಣ್ಣು ಕರು ಹುಟ್ಟಿದರೆ ಚಂದ" ಅನ್ನೋದು ದೊಡ್ಡವರ ವ್ಯವಹಾರ ಲೋಕದ ಮಾತು. ಆದರೆ ಮಕ್ಕಳ ಮನಸ್ಸಿಗೆ ಈ ವ್ಯವಹಾರ, ಲಾಭ-ನಷ್ಟದ ಸೋಂಕಿಲ್ಲ. ಅವರ ಲೋಕದಲ್ಲಿ ಮನುಷ್ಯರು, ಪ್ರಾಣಿಗಳು, ಹೆಣ್ಣು-ಗಂಡು ಎಲ್ಲಾ ಒಂದೇ.0 ಹಾಗಾಗಿಯೇ ಈ ಪುಟ್ಟ ಗೌರಿಗೆ ಕೊಟ್ಟಿಗೆಯ ಗಣಪನನ್ನು ಕಂಡರೆ ಜೀವ ಆದರೆ ದೊಡ್ಡವರ ಸಣ್ಣತನದಿಂದ ಗಣಪನಿಂದ ದೂರವಾಗುವ ಭಯ... ಮುಂದೇನಾಗುತ್ತದೆ ಅನ್ನುವುದನ್ನು ಪುಟಾಣಿ ಗೌರಿ-ಗಣಪನ ಕತೆಯನ್ನು ಓದಿ ತಿಳಿದುಕೊಳ್ಳಿ...
ಅರೆ ಮಲೆನಾಡಿನ ಭದ್ರಾವತಿ ನನ್ನ ಊರು. ಸ್ನಾತಕೋತ್ತರ ಪದವಿ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ, ಪುಟಾಣಿಗಳಿಗೆ ಶಿಕ್ಷಕಿಯಾಗಿ ಪಾಠ ಮಾಡುತ್ತಿರುವುದು ಕೂಡ ವಿಜ್ಞಾನವೇ ಆದರೂ, ಸಾಹಿತ್ಯ ನನ್ನ ಆಸಕ್ತಿಯ ಕ್ಷೇತ್ರ ಓದಿನ ಪಯಣ ಶುರುವಾಗಿದ್ದು ಸಾಯಿಸುತೆ, ತ್ರಿವೇಣಿ ಅವರುಗಳ ಪುಸ್ತಕದಿಂದ ಆದರೂ, ತೇಜಸ್ವಿಯವರ ಬರಹಗಳು ತುಂಬಾ ಪ್ರಭಾವಿಸಿವೆ. ಬದುಕಿನ ಎಲ್ಲಾ ಹಂತಗಳಲ್ಲೂ ಪುಸ್ತಕವನ್ನು ಜೊತೆ ಮಾಡಿಕೊಂಡವಳಿಗೆ ಎಲ್ಲೋ ಒಂದು ಕಡೆ ನಾಲ್ಕು ಅಕ್ಷರವನ್ನು ಬರೆಯುವ ಆಸೆ ಕೂಡ ಅವಾಗವಾಗ ಮೂಡುತ್ತಿತ್ತು. ನಾನೇ ಪುಟ್ಟ ಪುಟ್ಟ ಎರಡು ಮಕ್ಕಳ ತಾಯಿಯಾದ ಮೇಲೆ ಅದಕ್ಕೊಂದು ಮೂರ್ತ ರೂಪ ಸಿಕ್ಕಿತು. ಹಾಗೆ ಮೂಡಿಬಂದ ನನ್ನ ಮೂರನೇ ಕೂಸು 'ಪುಟ್ಟ ಗೌರಿ ಜೊತೆ ಪುಟ್ಟ ಗಣಪ", 'ಮನೆಯಲ್ಲಿ ಗಂಡು ಪೋರ, ಕೊಟ್ಟಿಗೆಯಲ್ಲಿ ಹೆಣ್ಣು ಕರು ಹುಟ್ಟಿದರೆ ಚಂದ" ಅನ್ನೋದು ದೊಡ್ಡವರ ವ್ಯವಹಾರ ಲೋಕದ ಮಾತು. ಆದರೆ ಮಕ್ಕಳ ಮನಸ್ಸಿಗೆ ಈ ವ್ಯವಹಾರ, ಲಾಭ-ನಷ್ಟದ ಸೋಂಕಿಲ್ಲ. ಅವರ ಲೋಕದಲ್ಲಿ ಮನುಷ್ಯರು, ಪ್ರಾಣಿಗಳು, ಹೆಣ್ಣು-ಗಂಡು ಎಲ್ಲಾ ಒಂದೇ.0 ಹಾಗಾಗಿಯೇ ಈ ಪುಟ್ಟ ಗೌರಿಗೆ ಕೊಟ್ಟಿಗೆಯ ಗಣಪನನ್ನು ಕಂಡರೆ ಜೀವ ಆದರೆ ದೊಡ್ಡವರ ಸಣ್ಣತನದಿಂದ ಗಣಪನಿಂದ ದೂರವಾಗುವ ಭಯ... ಮುಂದೇನಾಗುತ್ತದೆ ಅನ್ನುವುದನ್ನು ಪುಟಾಣಿ ಗೌರಿ-ಗಣಪನ ಕತೆಯನ್ನು ಓದಿ ತಿಳಿದುಕೊಳ್ಳಿ...
Description
ಅರೆ ಮಲೆನಾಡಿನ ಭದ್ರಾವತಿ ನನ್ನ ಊರು. ಸ್ನಾತಕೋತ್ತರ ಪದವಿ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ, ಪುಟಾಣಿಗಳಿಗೆ ಶಿಕ್ಷಕಿಯಾಗಿ ಪಾಠ ಮಾಡುತ್ತಿರುವುದು ಕೂಡ ವಿಜ್ಞಾನವೇ ಆದರೂ, ಸಾಹಿತ್ಯ ನನ್ನ ಆಸಕ್ತಿಯ ಕ್ಷೇತ್ರ ಓದಿನ ಪಯಣ ಶುರುವಾಗಿದ್ದು ಸಾಯಿಸುತೆ, ತ್ರಿವೇಣಿ ಅವರುಗಳ ಪುಸ್ತಕದಿಂದ ಆದರೂ, ತೇಜಸ್ವಿಯವರ ಬರಹಗಳು ತುಂಬಾ ಪ್ರಭಾವಿಸಿವೆ. ಬದುಕಿನ ಎಲ್ಲಾ ಹಂತಗಳಲ್ಲೂ ಪುಸ್ತಕವನ್ನು ಜೊತೆ ಮಾಡಿಕೊಂಡವಳಿಗೆ ಎಲ್ಲೋ ಒಂದು ಕಡೆ ನಾಲ್ಕು ಅಕ್ಷರವನ್ನು ಬರೆಯುವ ಆಸೆ ಕೂಡ ಅವಾಗವಾಗ ಮೂಡುತ್ತಿತ್ತು. ನಾನೇ ಪುಟ್ಟ ಪುಟ್ಟ ಎರಡು ಮಕ್ಕಳ ತಾಯಿಯಾದ ಮೇಲೆ ಅದಕ್ಕೊಂದು ಮೂರ್ತ ರೂಪ ಸಿಕ್ಕಿತು. ಹಾಗೆ ಮೂಡಿಬಂದ ನನ್ನ ಮೂರನೇ ಕೂಸು 'ಪುಟ್ಟ ಗೌರಿ ಜೊತೆ ಪುಟ್ಟ ಗಣಪ", 'ಮನೆಯಲ್ಲಿ ಗಂಡು ಪೋರ, ಕೊಟ್ಟಿಗೆಯಲ್ಲಿ ಹೆಣ್ಣು ಕರು ಹುಟ್ಟಿದರೆ ಚಂದ" ಅನ್ನೋದು ದೊಡ್ಡವರ ವ್ಯವಹಾರ ಲೋಕದ ಮಾತು. ಆದರೆ ಮಕ್ಕಳ ಮನಸ್ಸಿಗೆ ಈ ವ್ಯವಹಾರ, ಲಾಭ-ನಷ್ಟದ ಸೋಂಕಿಲ್ಲ. ಅವರ ಲೋಕದಲ್ಲಿ ಮನುಷ್ಯರು, ಪ್ರಾಣಿಗಳು, ಹೆಣ್ಣು-ಗಂಡು ಎಲ್ಲಾ ಒಂದೇ.0 ಹಾಗಾಗಿಯೇ ಈ ಪುಟ್ಟ ಗೌರಿಗೆ ಕೊಟ್ಟಿಗೆಯ ಗಣಪನನ್ನು ಕಂಡರೆ ಜೀವ ಆದರೆ ದೊಡ್ಡವರ ಸಣ್ಣತನದಿಂದ ಗಣಪನಿಂದ ದೂರವಾಗುವ ಭಯ... ಮುಂದೇನಾಗುತ್ತದೆ ಅನ್ನುವುದನ್ನು ಪುಟಾಣಿ ಗೌರಿ-ಗಣಪನ ಕತೆಯನ್ನು ಓದಿ ತಿಳಿದುಕೊಳ್ಳಿ...











