
ಪ್ರಶ್ನೋಪನಿಷದ್ವಿಜ್ಞಾನ
ಇಲ್ಲಿ ಇತರ ಉಪನಿಷತ್ತುಗಳಿಗೆ ಕೊಂಚ ಭಿನ್ನವಾದ ಹೇಳಿಕೆ ಕಾಣುತ್ತೇವೆ. ಐತರೇಯದಲ್ಲಿ 'ಮೃತ್ಯು ಅಪಾನದೇವತೆಯಾಗಿ ನಾಭಿಯನ್ನು ಪ್ರವೇಶಿಸಿತು' ಎಂದು ಹೇಳಿದರೆ ಇಲ್ಲಿ ಅದರ ಪ್ರಸ್ತಾಪವಿಲ್ಲ. ಅಗ್ನಿಯೇ ವಾಕ್ ಆಗಿ ಪ್ರವೇಶಿಸಿತು ಎಂದು ಐತರೇಯದಲ್ಲಿ ಹೇಳಿದರೆ ಇಲ್ಲಿ ಅಗ್ನಿ ಮತ್ತು ವಾಕ್ಕನ್ನು ಬೇರೆಬೇರೆಯಾಗಿ ಹೇಳಿದೆ. ಇಂತಹ ವ್ಯತ್ಯಾಸಗಳನ್ನೆಲ್ಲಾ ಸಾಧಕರು ತಮ್ಮ ಮನನ ಸಾಮರ್ಥ್ಯದಿಂದ ತಾವೇ ನಿರ್ಣಯಕ್ಕೆ ಬಂದು ಸಮನ್ವಯ ಮಾಡಿಕೊಳ್ಳಬೇಕು. ಎಂಟು ದೇವತೆಗಳು ಎಂಬ ಸಂಖ್ಯೆಯ ವಿಷಯದಲ್ಲಿ ಎರಡೂ ಉಪನಿಷತ್ತುಗಳಲ್ಲಿ ಸಹಮತವಿದೆ. ಮೂಲಭೂತ ತತ್ವ ಒಂದೇ. ಹೇಳಿಕೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಸಮನ್ವಯ ಮಾಡಿಕೊಳ್ಳಲು ಶಾಸ್ತ್ರಗ್ರಂಥಗಳು ನೆರವಾಗುತ್ತವೆಯೇ ವಿನಾ, ಅದೇ ಅಂತಿಮ ಎಂಬ ಹಠ ಬೇಡ....... ಆದುದರಿಂದ ವೇದ, ಉಪನಿಷತ್ತು, ಬೈಬಲ್, ಖುರಾನ್, ಗ್ರಂಥ ಸಾಹಿಬ್- ಯಾವುದೇ ಸದ್ದಂಥವಿರಲಿ ಅವುಗಳನ್ನು ಅಧ್ಯಯನ ಮಾಡಿ ಅವುಗಳ ನೆರವಿನಿಂದ ನಾವೇ ಮನನ ಕ್ರಿಯಾ ತಪಸ್ಸಿಗೆ ತೊಡಗಿ ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ಅಲ್ಲದೆ, ಇತರರು ಯಾರೂ ನಮ್ಮನ್ನು ಉದ್ಧರಿಸಲಾರರು.
"ಉದ್ಧರೇದಾತ್ಮನಾತ್ಮಾನಂ." ಮನುಕುಲದ ಹಿತಕ್ಕಾಗಿ ಈ ಬಗೆಯ ಮನನ ಕ್ರಿಯಾ ತಪಸ್ಸಿನಲ್ಲಿ ತಮ್ಮನ್ನು ತೊಡಗಿಸಿಕೊಂಡವರು ವಿದ್ವಾನ್ ಯು. ಪದ್ಮನಾಭ ಭಟ್ಟರು. ಇವರು ತ್ರಿಭಾಷಾ ಪಂಡಿತರು. ಬಾಲ್ಯದಿಂದಲೇ ಬರವಣಿಗೆಯ ಕಾಯಕದಲ್ಲಿ ನಿರತರಾದವರು. ಅಧ್ಯಯನ-ಅಧ್ಯಾಪನವನ್ನು ಪ್ರವೃತ್ತಿಯನ್ನಾಗಿಸಿಕೊಂಡವರು. ಜೀವನದುದ್ದಕ್ಕೂ ಕಾವು ಕೊಡುತ್ತಾ ಬಂದಿದ್ದ ಉಪನಿಷತ್ತುಗಳ ವೈಜ್ಞಾನಿಕ ವಿಶ್ಲೇಷಣೆ-ಈಗ ಕೃತಿಗಳ ಮೂಲಕ ಜಿಜ್ಞಾಸುಗಳ ಕೈಸೇರುತ್ತಿದೆ.
ಒಟ್ಟಿನಲ್ಲಿ ಶ್ರೀ ಪದ್ಮನಾಭ ಭಟ್ಟರು ನಮ್ಮ ದೇಶದ ಅಪರೂಪದ ಮತ್ತು ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು.
ಇಲ್ಲಿ ಇತರ ಉಪನಿಷತ್ತುಗಳಿಗೆ ಕೊಂಚ ಭಿನ್ನವಾದ ಹೇಳಿಕೆ ಕಾಣುತ್ತೇವೆ. ಐತರೇಯದಲ್ಲಿ 'ಮೃತ್ಯು ಅಪಾನದೇವತೆಯಾಗಿ ನಾಭಿಯನ್ನು ಪ್ರವೇಶಿಸಿತು' ಎಂದು ಹೇಳಿದರೆ ಇಲ್ಲಿ ಅದರ ಪ್ರಸ್ತಾಪವಿಲ್ಲ. ಅಗ್ನಿಯೇ ವಾಕ್ ಆಗಿ ಪ್ರವೇಶಿಸಿತು ಎಂದು ಐತರೇಯದಲ್ಲಿ ಹೇಳಿದರೆ ಇಲ್ಲಿ ಅಗ್ನಿ ಮತ್ತು ವಾಕ್ಕನ್ನು ಬೇರೆಬೇರೆಯಾಗಿ ಹೇಳಿದೆ. ಇಂತಹ ವ್ಯತ್ಯಾಸಗಳನ್ನೆಲ್ಲಾ ಸಾಧಕರು ತಮ್ಮ ಮನನ ಸಾಮರ್ಥ್ಯದಿಂದ ತಾವೇ ನಿರ್ಣಯಕ್ಕೆ ಬಂದು ಸಮನ್ವಯ ಮಾಡಿಕೊಳ್ಳಬೇಕು. ಎಂಟು ದೇವತೆಗಳು ಎಂಬ ಸಂಖ್ಯೆಯ ವಿಷಯದಲ್ಲಿ ಎರಡೂ ಉಪನಿಷತ್ತುಗಳಲ್ಲಿ ಸಹಮತವಿದೆ. ಮೂಲಭೂತ ತತ್ವ ಒಂದೇ. ಹೇಳಿಕೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಸಮನ್ವಯ ಮಾಡಿಕೊಳ್ಳಲು ಶಾಸ್ತ್ರಗ್ರಂಥಗಳು ನೆರವಾಗುತ್ತವೆಯೇ ವಿನಾ, ಅದೇ ಅಂತಿಮ ಎಂಬ ಹಠ ಬೇಡ....... ಆದುದರಿಂದ ವೇದ, ಉಪನಿಷತ್ತು, ಬೈಬಲ್, ಖುರಾನ್, ಗ್ರಂಥ ಸಾಹಿಬ್- ಯಾವುದೇ ಸದ್ದಂಥವಿರಲಿ ಅವುಗಳನ್ನು ಅಧ್ಯಯನ ಮಾಡಿ ಅವುಗಳ ನೆರವಿನಿಂದ ನಾವೇ ಮನನ ಕ್ರಿಯಾ ತಪಸ್ಸಿಗೆ ತೊಡಗಿ ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ಅಲ್ಲದೆ, ಇತರರು ಯಾರೂ ನಮ್ಮನ್ನು ಉದ್ಧರಿಸಲಾರರು.
"ಉದ್ಧರೇದಾತ್ಮನಾತ್ಮಾನಂ." ಮನುಕುಲದ ಹಿತಕ್ಕಾಗಿ ಈ ಬಗೆಯ ಮನನ ಕ್ರಿಯಾ ತಪಸ್ಸಿನಲ್ಲಿ ತಮ್ಮನ್ನು ತೊಡಗಿಸಿಕೊಂಡವರು ವಿದ್ವಾನ್ ಯು. ಪದ್ಮನಾಭ ಭಟ್ಟರು. ಇವರು ತ್ರಿಭಾಷಾ ಪಂಡಿತರು. ಬಾಲ್ಯದಿಂದಲೇ ಬರವಣಿಗೆಯ ಕಾಯಕದಲ್ಲಿ ನಿರತರಾದವರು. ಅಧ್ಯಯನ-ಅಧ್ಯಾಪನವನ್ನು ಪ್ರವೃತ್ತಿಯನ್ನಾಗಿಸಿಕೊಂಡವರು. ಜೀವನದುದ್ದಕ್ಕೂ ಕಾವು ಕೊಡುತ್ತಾ ಬಂದಿದ್ದ ಉಪನಿಷತ್ತುಗಳ ವೈಜ್ಞಾನಿಕ ವಿಶ್ಲೇಷಣೆ-ಈಗ ಕೃತಿಗಳ ಮೂಲಕ ಜಿಜ್ಞಾಸುಗಳ ಕೈಸೇರುತ್ತಿದೆ.
ಒಟ್ಟಿನಲ್ಲಿ ಶ್ರೀ ಪದ್ಮನಾಭ ಭಟ್ಟರು ನಮ್ಮ ದೇಶದ ಅಪರೂಪದ ಮತ್ತು ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು.
Description
ಇಲ್ಲಿ ಇತರ ಉಪನಿಷತ್ತುಗಳಿಗೆ ಕೊಂಚ ಭಿನ್ನವಾದ ಹೇಳಿಕೆ ಕಾಣುತ್ತೇವೆ. ಐತರೇಯದಲ್ಲಿ 'ಮೃತ್ಯು ಅಪಾನದೇವತೆಯಾಗಿ ನಾಭಿಯನ್ನು ಪ್ರವೇಶಿಸಿತು' ಎಂದು ಹೇಳಿದರೆ ಇಲ್ಲಿ ಅದರ ಪ್ರಸ್ತಾಪವಿಲ್ಲ. ಅಗ್ನಿಯೇ ವಾಕ್ ಆಗಿ ಪ್ರವೇಶಿಸಿತು ಎಂದು ಐತರೇಯದಲ್ಲಿ ಹೇಳಿದರೆ ಇಲ್ಲಿ ಅಗ್ನಿ ಮತ್ತು ವಾಕ್ಕನ್ನು ಬೇರೆಬೇರೆಯಾಗಿ ಹೇಳಿದೆ. ಇಂತಹ ವ್ಯತ್ಯಾಸಗಳನ್ನೆಲ್ಲಾ ಸಾಧಕರು ತಮ್ಮ ಮನನ ಸಾಮರ್ಥ್ಯದಿಂದ ತಾವೇ ನಿರ್ಣಯಕ್ಕೆ ಬಂದು ಸಮನ್ವಯ ಮಾಡಿಕೊಳ್ಳಬೇಕು. ಎಂಟು ದೇವತೆಗಳು ಎಂಬ ಸಂಖ್ಯೆಯ ವಿಷಯದಲ್ಲಿ ಎರಡೂ ಉಪನಿಷತ್ತುಗಳಲ್ಲಿ ಸಹಮತವಿದೆ. ಮೂಲಭೂತ ತತ್ವ ಒಂದೇ. ಹೇಳಿಕೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಸಮನ್ವಯ ಮಾಡಿಕೊಳ್ಳಲು ಶಾಸ್ತ್ರಗ್ರಂಥಗಳು ನೆರವಾಗುತ್ತವೆಯೇ ವಿನಾ, ಅದೇ ಅಂತಿಮ ಎಂಬ ಹಠ ಬೇಡ....... ಆದುದರಿಂದ ವೇದ, ಉಪನಿಷತ್ತು, ಬೈಬಲ್, ಖುರಾನ್, ಗ್ರಂಥ ಸಾಹಿಬ್- ಯಾವುದೇ ಸದ್ದಂಥವಿರಲಿ ಅವುಗಳನ್ನು ಅಧ್ಯಯನ ಮಾಡಿ ಅವುಗಳ ನೆರವಿನಿಂದ ನಾವೇ ಮನನ ಕ್ರಿಯಾ ತಪಸ್ಸಿಗೆ ತೊಡಗಿ ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ಅಲ್ಲದೆ, ಇತರರು ಯಾರೂ ನಮ್ಮನ್ನು ಉದ್ಧರಿಸಲಾರರು.
"ಉದ್ಧರೇದಾತ್ಮನಾತ್ಮಾನಂ." ಮನುಕುಲದ ಹಿತಕ್ಕಾಗಿ ಈ ಬಗೆಯ ಮನನ ಕ್ರಿಯಾ ತಪಸ್ಸಿನಲ್ಲಿ ತಮ್ಮನ್ನು ತೊಡಗಿಸಿಕೊಂಡವರು ವಿದ್ವಾನ್ ಯು. ಪದ್ಮನಾಭ ಭಟ್ಟರು. ಇವರು ತ್ರಿಭಾಷಾ ಪಂಡಿತರು. ಬಾಲ್ಯದಿಂದಲೇ ಬರವಣಿಗೆಯ ಕಾಯಕದಲ್ಲಿ ನಿರತರಾದವರು. ಅಧ್ಯಯನ-ಅಧ್ಯಾಪನವನ್ನು ಪ್ರವೃತ್ತಿಯನ್ನಾಗಿಸಿಕೊಂಡವರು. ಜೀವನದುದ್ದಕ್ಕೂ ಕಾವು ಕೊಡುತ್ತಾ ಬಂದಿದ್ದ ಉಪನಿಷತ್ತುಗಳ ವೈಜ್ಞಾನಿಕ ವಿಶ್ಲೇಷಣೆ-ಈಗ ಕೃತಿಗಳ ಮೂಲಕ ಜಿಜ್ಞಾಸುಗಳ ಕೈಸೇರುತ್ತಿದೆ.
ಒಟ್ಟಿನಲ್ಲಿ ಶ್ರೀ ಪದ್ಮನಾಭ ಭಟ್ಟರು ನಮ್ಮ ದೇಶದ ಅಪರೂಪದ ಮತ್ತು ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು.












