
ಪಾದುಕೆಯ ಕಣ್ಣಂಚಿನಲ್ಲಿ
ಇದೊಂದು ಸೃಷ್ಟಿಶೀಲತೆಯ ಫಲಿತ ವರ್ತಮಾನದಿಂದ ಅತೀತಕ್ಕೂ, ಅತೀತದಿಂದ ವರ್ತಮಾನಕ್ಕೂ ನಿರಂತರವಾಗಿ ಚಲಿಸುವುದು ಕೃತಿಯ ಮೆರುಗು.
ಸೃಜನ್ ಕೌಶಲವಿರುವುದು ವರ್ಣನಾ ನೈಪುಣ್ಯದಲ್ಲಿ. ಇದು ಈ ಕಾಲದಿಂದ ಆ ಕಾಲಕ್ಕೆ ಕೊಂಡೊಯ್ದು ಓದುಗ ನಂದಿಗ್ರಾಮ, ಕೋಸಲ, ಕೇಕೆಯ, ಚಿತ್ರಕೂಟದಲ್ಲೆಲ್ಲ ಅಡ್ಡಾಡುವಂತೆ ಮಾಡುತ್ತದೆ.
ಸೃಜನ್ ಪದ್ಯಗಂಧಿಯಾದ ಗದ್ಯಶೈಲಿಯವರು. ಯಕ್ಷಗಾನದ ಉದಯೋನ್ಮುಖ ಭಾಗವತರಾಗಿರುವುದು ಅವರ ಈ ಶೈಲಿಯನ್ನು ಪ್ರಭಾವಿಸಿರಬಹುದು. ಈ ಶೈಲಿ ಅಭ್ಯಾಸದಿಂದ ರೂಢಿಸಿಕೊಂಡಂತಿರದೆ, ಸಹಜವಾಗಿದೆ.
'ತ್ರೇತೆಯ ಮಜ್ಜಿಗೆ ಮಡಿಸುವ ವಿಧಿ; ಮಂಧರೆ. ನವನೀತ ಹೊರ ತೆಗೆಯಲು' ಎನ್ನುವಂತಹ ಸಾಲುಗಳು ಕೃತಿಗೆ ಹೊಳಪು ನೀಡಿವೆ. ಇಂತಹ ಒಳನೋಟದ ಲೆಕ್ಕವಿಲ್ಲದ ಸಾಲುಗಳು ಇಲ್ಲಿವೆ.
ಮುಳುಗಿಯೂ ಮುಳುಗದ 'ಗುಂಡೂಮನೆ' ಎನ್ನುವ ಕಲೆ-ಸಾಹಿತ್ಯಗಳ ತವನಿಧಿಯ ಹೊಸ ಭರವಸೆ ಸೃಜನ್. ಸಮಕಾಲೀನ ಮನಸ್ಸುಗಳು ಇನ್ನೆಲ್ಲೋ ಸುಖ ಅರಸುವಾಗ ಕಲೆ-ಸಾಹಿತ್ಯಗಳಲ್ಲಿ, ಅದರಲ್ಲೂ ಹಳೆಯದರ ವಿಸ್ತರಣದಲ್ಲಿ ಈ ಯುವಮನಸ್ಸು ತೊಡಗಿರುವುದು ನೆಮ್ಮದಿಯನ್ನು ನೀಡುತ್ತದೆ.
ಕೃತಿಯಿದು ಪೂರ್ವಸೂರಿಗಳ ಭಾವಕ್ಕೆ ಭಂಗ ತಾರದೇ ಹೊಸತನವನ್ನು ಮೈಗೂಡಿಸಿಕೊಂಡಿರುವುದು ಮೆಚ್ಚುಗೆಯನ್ನು ಮೂಡಿಸುತ್ತದೆ. ಇನ್ನೊಂದರ ಚಿಗುರಾದ ಬಂದಳಿಕೆಯನ್ನು ಬೆಳೆಯಗೊಡದೆ ನಾವೀನ್ಯದ ಚಿಗುರು ಹೊತ್ತು ಬೇರಿನ ಪ್ರಾಚೀನತೆಯನ್ನು ಬಿತ್ತರಿಸಿದರೆ ಅದು ಬೆಳವಣಿಗೆ. ಈ ಕೃತಿ ಹಾಗಿದೆ. ಕೃತಿಯನ್ನು ಓದುತ್ತಾ ಕಾಲ-ದೇಶ ಮರೆತೆ; ನಾಲ್ಕು ಮಾತು ಬರೆಯುವ ಅವಕಾಶಕ್ಕೆ ಹೆಮ್ಮೆಯಾಂತೆ ಎಂದರೆ ನಾನು ಕೃತಿಯನ್ನು ಗೌರವಿಸಿದಂತಾಯಿತು. ನವನವೋನ್ನೇಷಶಾಲಿಯಾಗಿ ವರ್ಧಿಸುತ್ತಲೇ ಇರಲಿ ಕವಿತ್ವ ಎನ್ನುವುದು ಶುಭಾಕಾಂಕ್ಷೆ.
ವಿದ್ವಾನ್ ಜಗದೀಶಶರ್ಮಾ ಸಂಪ
ಇದೊಂದು ಸೃಷ್ಟಿಶೀಲತೆಯ ಫಲಿತ ವರ್ತಮಾನದಿಂದ ಅತೀತಕ್ಕೂ, ಅತೀತದಿಂದ ವರ್ತಮಾನಕ್ಕೂ ನಿರಂತರವಾಗಿ ಚಲಿಸುವುದು ಕೃತಿಯ ಮೆರುಗು.
ಸೃಜನ್ ಕೌಶಲವಿರುವುದು ವರ್ಣನಾ ನೈಪುಣ್ಯದಲ್ಲಿ. ಇದು ಈ ಕಾಲದಿಂದ ಆ ಕಾಲಕ್ಕೆ ಕೊಂಡೊಯ್ದು ಓದುಗ ನಂದಿಗ್ರಾಮ, ಕೋಸಲ, ಕೇಕೆಯ, ಚಿತ್ರಕೂಟದಲ್ಲೆಲ್ಲ ಅಡ್ಡಾಡುವಂತೆ ಮಾಡುತ್ತದೆ.
ಸೃಜನ್ ಪದ್ಯಗಂಧಿಯಾದ ಗದ್ಯಶೈಲಿಯವರು. ಯಕ್ಷಗಾನದ ಉದಯೋನ್ಮುಖ ಭಾಗವತರಾಗಿರುವುದು ಅವರ ಈ ಶೈಲಿಯನ್ನು ಪ್ರಭಾವಿಸಿರಬಹುದು. ಈ ಶೈಲಿ ಅಭ್ಯಾಸದಿಂದ ರೂಢಿಸಿಕೊಂಡಂತಿರದೆ, ಸಹಜವಾಗಿದೆ.
'ತ್ರೇತೆಯ ಮಜ್ಜಿಗೆ ಮಡಿಸುವ ವಿಧಿ; ಮಂಧರೆ. ನವನೀತ ಹೊರ ತೆಗೆಯಲು' ಎನ್ನುವಂತಹ ಸಾಲುಗಳು ಕೃತಿಗೆ ಹೊಳಪು ನೀಡಿವೆ. ಇಂತಹ ಒಳನೋಟದ ಲೆಕ್ಕವಿಲ್ಲದ ಸಾಲುಗಳು ಇಲ್ಲಿವೆ.
ಮುಳುಗಿಯೂ ಮುಳುಗದ 'ಗುಂಡೂಮನೆ' ಎನ್ನುವ ಕಲೆ-ಸಾಹಿತ್ಯಗಳ ತವನಿಧಿಯ ಹೊಸ ಭರವಸೆ ಸೃಜನ್. ಸಮಕಾಲೀನ ಮನಸ್ಸುಗಳು ಇನ್ನೆಲ್ಲೋ ಸುಖ ಅರಸುವಾಗ ಕಲೆ-ಸಾಹಿತ್ಯಗಳಲ್ಲಿ, ಅದರಲ್ಲೂ ಹಳೆಯದರ ವಿಸ್ತರಣದಲ್ಲಿ ಈ ಯುವಮನಸ್ಸು ತೊಡಗಿರುವುದು ನೆಮ್ಮದಿಯನ್ನು ನೀಡುತ್ತದೆ.
ಕೃತಿಯಿದು ಪೂರ್ವಸೂರಿಗಳ ಭಾವಕ್ಕೆ ಭಂಗ ತಾರದೇ ಹೊಸತನವನ್ನು ಮೈಗೂಡಿಸಿಕೊಂಡಿರುವುದು ಮೆಚ್ಚುಗೆಯನ್ನು ಮೂಡಿಸುತ್ತದೆ. ಇನ್ನೊಂದರ ಚಿಗುರಾದ ಬಂದಳಿಕೆಯನ್ನು ಬೆಳೆಯಗೊಡದೆ ನಾವೀನ್ಯದ ಚಿಗುರು ಹೊತ್ತು ಬೇರಿನ ಪ್ರಾಚೀನತೆಯನ್ನು ಬಿತ್ತರಿಸಿದರೆ ಅದು ಬೆಳವಣಿಗೆ. ಈ ಕೃತಿ ಹಾಗಿದೆ. ಕೃತಿಯನ್ನು ಓದುತ್ತಾ ಕಾಲ-ದೇಶ ಮರೆತೆ; ನಾಲ್ಕು ಮಾತು ಬರೆಯುವ ಅವಕಾಶಕ್ಕೆ ಹೆಮ್ಮೆಯಾಂತೆ ಎಂದರೆ ನಾನು ಕೃತಿಯನ್ನು ಗೌರವಿಸಿದಂತಾಯಿತು. ನವನವೋನ್ನೇಷಶಾಲಿಯಾಗಿ ವರ್ಧಿಸುತ್ತಲೇ ಇರಲಿ ಕವಿತ್ವ ಎನ್ನುವುದು ಶುಭಾಕಾಂಕ್ಷೆ.
ವಿದ್ವಾನ್ ಜಗದೀಶಶರ್ಮಾ ಸಂಪ
Original: $0.86
-70%$0.86
$0.26Description
ಇದೊಂದು ಸೃಷ್ಟಿಶೀಲತೆಯ ಫಲಿತ ವರ್ತಮಾನದಿಂದ ಅತೀತಕ್ಕೂ, ಅತೀತದಿಂದ ವರ್ತಮಾನಕ್ಕೂ ನಿರಂತರವಾಗಿ ಚಲಿಸುವುದು ಕೃತಿಯ ಮೆರುಗು.
ಸೃಜನ್ ಕೌಶಲವಿರುವುದು ವರ್ಣನಾ ನೈಪುಣ್ಯದಲ್ಲಿ. ಇದು ಈ ಕಾಲದಿಂದ ಆ ಕಾಲಕ್ಕೆ ಕೊಂಡೊಯ್ದು ಓದುಗ ನಂದಿಗ್ರಾಮ, ಕೋಸಲ, ಕೇಕೆಯ, ಚಿತ್ರಕೂಟದಲ್ಲೆಲ್ಲ ಅಡ್ಡಾಡುವಂತೆ ಮಾಡುತ್ತದೆ.
ಸೃಜನ್ ಪದ್ಯಗಂಧಿಯಾದ ಗದ್ಯಶೈಲಿಯವರು. ಯಕ್ಷಗಾನದ ಉದಯೋನ್ಮುಖ ಭಾಗವತರಾಗಿರುವುದು ಅವರ ಈ ಶೈಲಿಯನ್ನು ಪ್ರಭಾವಿಸಿರಬಹುದು. ಈ ಶೈಲಿ ಅಭ್ಯಾಸದಿಂದ ರೂಢಿಸಿಕೊಂಡಂತಿರದೆ, ಸಹಜವಾಗಿದೆ.
'ತ್ರೇತೆಯ ಮಜ್ಜಿಗೆ ಮಡಿಸುವ ವಿಧಿ; ಮಂಧರೆ. ನವನೀತ ಹೊರ ತೆಗೆಯಲು' ಎನ್ನುವಂತಹ ಸಾಲುಗಳು ಕೃತಿಗೆ ಹೊಳಪು ನೀಡಿವೆ. ಇಂತಹ ಒಳನೋಟದ ಲೆಕ್ಕವಿಲ್ಲದ ಸಾಲುಗಳು ಇಲ್ಲಿವೆ.
ಮುಳುಗಿಯೂ ಮುಳುಗದ 'ಗುಂಡೂಮನೆ' ಎನ್ನುವ ಕಲೆ-ಸಾಹಿತ್ಯಗಳ ತವನಿಧಿಯ ಹೊಸ ಭರವಸೆ ಸೃಜನ್. ಸಮಕಾಲೀನ ಮನಸ್ಸುಗಳು ಇನ್ನೆಲ್ಲೋ ಸುಖ ಅರಸುವಾಗ ಕಲೆ-ಸಾಹಿತ್ಯಗಳಲ್ಲಿ, ಅದರಲ್ಲೂ ಹಳೆಯದರ ವಿಸ್ತರಣದಲ್ಲಿ ಈ ಯುವಮನಸ್ಸು ತೊಡಗಿರುವುದು ನೆಮ್ಮದಿಯನ್ನು ನೀಡುತ್ತದೆ.
ಕೃತಿಯಿದು ಪೂರ್ವಸೂರಿಗಳ ಭಾವಕ್ಕೆ ಭಂಗ ತಾರದೇ ಹೊಸತನವನ್ನು ಮೈಗೂಡಿಸಿಕೊಂಡಿರುವುದು ಮೆಚ್ಚುಗೆಯನ್ನು ಮೂಡಿಸುತ್ತದೆ. ಇನ್ನೊಂದರ ಚಿಗುರಾದ ಬಂದಳಿಕೆಯನ್ನು ಬೆಳೆಯಗೊಡದೆ ನಾವೀನ್ಯದ ಚಿಗುರು ಹೊತ್ತು ಬೇರಿನ ಪ್ರಾಚೀನತೆಯನ್ನು ಬಿತ್ತರಿಸಿದರೆ ಅದು ಬೆಳವಣಿಗೆ. ಈ ಕೃತಿ ಹಾಗಿದೆ. ಕೃತಿಯನ್ನು ಓದುತ್ತಾ ಕಾಲ-ದೇಶ ಮರೆತೆ; ನಾಲ್ಕು ಮಾತು ಬರೆಯುವ ಅವಕಾಶಕ್ಕೆ ಹೆಮ್ಮೆಯಾಂತೆ ಎಂದರೆ ನಾನು ಕೃತಿಯನ್ನು ಗೌರವಿಸಿದಂತಾಯಿತು. ನವನವೋನ್ನೇಷಶಾಲಿಯಾಗಿ ವರ್ಧಿಸುತ್ತಲೇ ಇರಲಿ ಕವಿತ್ವ ಎನ್ನುವುದು ಶುಭಾಕಾಂಕ್ಷೆ.
ವಿದ್ವಾನ್ ಜಗದೀಶಶರ್ಮಾ ಸಂಪ












