HomeStore

ನವಿಲು ಕೊಂದ ಹುಡುಗ

Product image 1
1 / 2

ನವಿಲು ಕೊಂದ ಹುಡುಗ

ಈ ಸಚಿನ್ ಎಂಬ ಐಟಿ ಹುಡುಗ ಕನ್ನಡ ಕಥಾಲೋಕ ಪ್ರವೇಶಿಸಿದ್ದು ತೀರಾ ಆಕಸ್ಮಿಕ ಅಂತೇನು ಹೇಳಲಾರೆ.

ಆದರೆ ಈ ಹುಡುಗನನ್ನು ನಮ್ಮ ಕಥೆಕೂಟ ಕಟ್ಟಿ ಬೆಳಸಿದೆ ಎಂಬುದರಲ್ಲಿ ನಮಗ್ಯಾರಿಗೂ ಅನುಮಾನವೇ ಇಲ್ಲ. ನಮ್ಮ ಬಳಗದ ತುಂಟಾತಿತುಂಟ ಹುಡುಗ ಸಚಿನ್ ಬರೆದ ಮೊದಲ ಕಥೆಯನ್ನು ಓದಿದಾಗ ಇಲ್ಲೊಬ್ಬ ಕತಗಾರ ಹುಟ್ಟಿಬಂದ ಎಂದನಿಸಿತ್ತು. ಇದೀಗ ದಿಟವಾಯಿತು.

ಸಚಿನ್ ಮಲೆನಾಡಿನವರು ವಾಸ ಮಹಾನಗರದಲ್ಲಿ ಹಾಗಾಗಿ ಇರುವಲ್ಲಿ ಇರಲಾರದೇ ಇದ್ದೆಡೆಯಿಂದ ಇರಬೇಕಾದೆಡೆಗೆ ಅವರ ಭಾವಲೋಕ ಹೊಯ್ದಾಡುತ್ತದೆ. ಅದು ಅವರ ಕಥೆಗಳಲ್ಲಿ ದಟ್ಟವಾಗಿ ಕಾಣಿಸಿಕೊಂಡಿದೆ. ಸಚಿನ್ ಕಥೆಗಳು ಅವರಷ್ಟೇ ತುಂಟವಾಗಿವ. ಕೆಲವೊಮ್ಮೆ ಕಥೆಗಳು ಮುಂಗಾರು ಮಳೆಯಂತೆ ಕಾಣುತ್ತವೆ.

ತೇಜಸ್ವಿ ಅವರ ಗಾಢ ಪ್ರಭಾವಕ್ಕೆ ಒಳಗಾಗಿರುವುದು ಸತ್ಯಸ್ಯ ಸತ್ಯವೇ. ಆಲನಹಳ್ಳಿಯವರ ನೆರಳು ಅನೇಕ ಕಡೆ ಕಂಡು ಕಾಣಿಸಿ ಮರೆಯಾಗುತ್ತದೆ. ಕುವೆಂಪು ಗದ್ಯ ಅಲ್ಲಲ್ಲಿ ದಾಟಿ ಸಾಗುತ್ತದೆ. ಇದನ್ನು ಪ್ರಭಾವ ಅಂತಲೇ ಕರೆಯಲಾಗದು. ಹೊಸ ತಲೆಮಾರಿನ ಮಲೆನಾಡಿನ ಹುಡುಗನ ಓದಿನ ವಿಸ್ತಾರ ಇದು. ಇದು ಬೇಕಾಗಿರುವುದು, ಓದುವುದೇ ಇಲ್ಲ ಈ ಜಮಾನ ಎಂಬ ಬೇಸರದ ನಡುವೆ ಸಚಿನ್ ಓದಿ ಬರೆದು ಬೆರಗು ಮತ್ತು ಭರವಸೆ ಮೂಡಿಸುವುದು ಅವರ ಇಷ್ಟದ ಬ್ಲ್ಯಾಕ್ ಡಾಗ್‌ನಂತೆ ಸಂತೋಷ ಕೊಡುತ್ತದೆ.

- ಗೋಪಾಲಕೃಷ್ಣ ಕುಂಟಿನಿ
ಈ ಸಚಿನ್ ಎಂಬ ಐಟಿ ಹುಡುಗ ಕನ್ನಡ ಕಥಾಲೋಕ ಪ್ರವೇಶಿಸಿದ್ದು ತೀರಾ ಆಕಸ್ಮಿಕ ಅಂತೇನು ಹೇಳಲಾರೆ.

ಆದರೆ ಈ ಹುಡುಗನನ್ನು ನಮ್ಮ ಕಥೆಕೂಟ ಕಟ್ಟಿ ಬೆಳಸಿದೆ ಎಂಬುದರಲ್ಲಿ ನಮಗ್ಯಾರಿಗೂ ಅನುಮಾನವೇ ಇಲ್ಲ. ನಮ್ಮ ಬಳಗದ ತುಂಟಾತಿತುಂಟ ಹುಡುಗ ಸಚಿನ್ ಬರೆದ ಮೊದಲ ಕಥೆಯನ್ನು ಓದಿದಾಗ ಇಲ್ಲೊಬ್ಬ ಕತಗಾರ ಹುಟ್ಟಿಬಂದ ಎಂದನಿಸಿತ್ತು. ಇದೀಗ ದಿಟವಾಯಿತು.

ಸಚಿನ್ ಮಲೆನಾಡಿನವರು ವಾಸ ಮಹಾನಗರದಲ್ಲಿ ಹಾಗಾಗಿ ಇರುವಲ್ಲಿ ಇರಲಾರದೇ ಇದ್ದೆಡೆಯಿಂದ ಇರಬೇಕಾದೆಡೆಗೆ ಅವರ ಭಾವಲೋಕ ಹೊಯ್ದಾಡುತ್ತದೆ. ಅದು ಅವರ ಕಥೆಗಳಲ್ಲಿ ದಟ್ಟವಾಗಿ ಕಾಣಿಸಿಕೊಂಡಿದೆ. ಸಚಿನ್ ಕಥೆಗಳು ಅವರಷ್ಟೇ ತುಂಟವಾಗಿವ. ಕೆಲವೊಮ್ಮೆ ಕಥೆಗಳು ಮುಂಗಾರು ಮಳೆಯಂತೆ ಕಾಣುತ್ತವೆ.

ತೇಜಸ್ವಿ ಅವರ ಗಾಢ ಪ್ರಭಾವಕ್ಕೆ ಒಳಗಾಗಿರುವುದು ಸತ್ಯಸ್ಯ ಸತ್ಯವೇ. ಆಲನಹಳ್ಳಿಯವರ ನೆರಳು ಅನೇಕ ಕಡೆ ಕಂಡು ಕಾಣಿಸಿ ಮರೆಯಾಗುತ್ತದೆ. ಕುವೆಂಪು ಗದ್ಯ ಅಲ್ಲಲ್ಲಿ ದಾಟಿ ಸಾಗುತ್ತದೆ. ಇದನ್ನು ಪ್ರಭಾವ ಅಂತಲೇ ಕರೆಯಲಾಗದು. ಹೊಸ ತಲೆಮಾರಿನ ಮಲೆನಾಡಿನ ಹುಡುಗನ ಓದಿನ ವಿಸ್ತಾರ ಇದು. ಇದು ಬೇಕಾಗಿರುವುದು, ಓದುವುದೇ ಇಲ್ಲ ಈ ಜಮಾನ ಎಂಬ ಬೇಸರದ ನಡುವೆ ಸಚಿನ್ ಓದಿ ಬರೆದು ಬೆರಗು ಮತ್ತು ಭರವಸೆ ಮೂಡಿಸುವುದು ಅವರ ಇಷ್ಟದ ಬ್ಲ್ಯಾಕ್ ಡಾಗ್‌ನಂತೆ ಸಂತೋಷ ಕೊಡುತ್ತದೆ.

- ಗೋಪಾಲಕೃಷ್ಣ ಕುಂಟಿನಿ
$1.03
ನವಿಲು ಕೊಂದ ಹುಡುಗ
$1.03

Description

ಈ ಸಚಿನ್ ಎಂಬ ಐಟಿ ಹುಡುಗ ಕನ್ನಡ ಕಥಾಲೋಕ ಪ್ರವೇಶಿಸಿದ್ದು ತೀರಾ ಆಕಸ್ಮಿಕ ಅಂತೇನು ಹೇಳಲಾರೆ.

ಆದರೆ ಈ ಹುಡುಗನನ್ನು ನಮ್ಮ ಕಥೆಕೂಟ ಕಟ್ಟಿ ಬೆಳಸಿದೆ ಎಂಬುದರಲ್ಲಿ ನಮಗ್ಯಾರಿಗೂ ಅನುಮಾನವೇ ಇಲ್ಲ. ನಮ್ಮ ಬಳಗದ ತುಂಟಾತಿತುಂಟ ಹುಡುಗ ಸಚಿನ್ ಬರೆದ ಮೊದಲ ಕಥೆಯನ್ನು ಓದಿದಾಗ ಇಲ್ಲೊಬ್ಬ ಕತಗಾರ ಹುಟ್ಟಿಬಂದ ಎಂದನಿಸಿತ್ತು. ಇದೀಗ ದಿಟವಾಯಿತು.

ಸಚಿನ್ ಮಲೆನಾಡಿನವರು ವಾಸ ಮಹಾನಗರದಲ್ಲಿ ಹಾಗಾಗಿ ಇರುವಲ್ಲಿ ಇರಲಾರದೇ ಇದ್ದೆಡೆಯಿಂದ ಇರಬೇಕಾದೆಡೆಗೆ ಅವರ ಭಾವಲೋಕ ಹೊಯ್ದಾಡುತ್ತದೆ. ಅದು ಅವರ ಕಥೆಗಳಲ್ಲಿ ದಟ್ಟವಾಗಿ ಕಾಣಿಸಿಕೊಂಡಿದೆ. ಸಚಿನ್ ಕಥೆಗಳು ಅವರಷ್ಟೇ ತುಂಟವಾಗಿವ. ಕೆಲವೊಮ್ಮೆ ಕಥೆಗಳು ಮುಂಗಾರು ಮಳೆಯಂತೆ ಕಾಣುತ್ತವೆ.

ತೇಜಸ್ವಿ ಅವರ ಗಾಢ ಪ್ರಭಾವಕ್ಕೆ ಒಳಗಾಗಿರುವುದು ಸತ್ಯಸ್ಯ ಸತ್ಯವೇ. ಆಲನಹಳ್ಳಿಯವರ ನೆರಳು ಅನೇಕ ಕಡೆ ಕಂಡು ಕಾಣಿಸಿ ಮರೆಯಾಗುತ್ತದೆ. ಕುವೆಂಪು ಗದ್ಯ ಅಲ್ಲಲ್ಲಿ ದಾಟಿ ಸಾಗುತ್ತದೆ. ಇದನ್ನು ಪ್ರಭಾವ ಅಂತಲೇ ಕರೆಯಲಾಗದು. ಹೊಸ ತಲೆಮಾರಿನ ಮಲೆನಾಡಿನ ಹುಡುಗನ ಓದಿನ ವಿಸ್ತಾರ ಇದು. ಇದು ಬೇಕಾಗಿರುವುದು, ಓದುವುದೇ ಇಲ್ಲ ಈ ಜಮಾನ ಎಂಬ ಬೇಸರದ ನಡುವೆ ಸಚಿನ್ ಓದಿ ಬರೆದು ಬೆರಗು ಮತ್ತು ಭರವಸೆ ಮೂಡಿಸುವುದು ಅವರ ಇಷ್ಟದ ಬ್ಲ್ಯಾಕ್ ಡಾಗ್‌ನಂತೆ ಸಂತೋಷ ಕೊಡುತ್ತದೆ.

- ಗೋಪಾಲಕೃಷ್ಣ ಕುಂಟಿನಿ
ನವಿಲು ಕೊಂದ ಹುಡುಗ | Harivu Books