
ನದಿ ದಾಟಿ ಬಂದವರು
ಶಶಿಧರ ಹಾಲಾಡಿಯವರ ಮೊದಲ ಎರಡು ಕಾದಂಬರಿಗಳ ಕಥನ ಕೇಂದ್ರ ಅಖಿಲ ಭಾರತ (ಕಾದಂಬರಿ - 'ಕಾಲಕೋಶ') ಮತ್ತು ಬಯಲು ಸೀಮೆ (ಕಾದಂಬರಿ – 'ಅಜ್ಜಿ') ಆಗಿದ್ದವು. ಈ ಮೂರನೆಯ ಕಾದಂಬರಿಯ ('ನದಿ ದಾಟಿ ಬಂದವರು') ಕಥನ ಕೇಂದ್ರ ಕರಾವಳಿಯ ಒಳನಾಡಿನ ಹಳ್ಳಿಗಾಡು. ಕುವೆಂಪು ಅವರ ಮಲೆನಾಡು ಮತ್ತು ಕಾರಂತರ 'ಮರಳಿ ಮಣ್ಣಿಗೆ'ಯ ಕರಾವಳಿ – ಈ ಎರಡು ಸೀಮೆಗಳ ನಡುವಿನ, ಕರಾವಳಿಯ ಒಳಭಾಗದ ಕಾಡು, ಗುಡ್ಡ, ಗದ್ದೆ, ಹೊಳೆಗಳ ದಟ್ಟ ಪರಿಸರದಲ್ಲಿ ಬದುಕಿದ್ದವರ ಬದುಕಿನೊಳಗೆ ಲೇಖಕರು ಈ ಕಾದಂಬರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ.
ಹಾಲಾಡಿಯವರು ಕತೆ ಹೇಳುವಾಗ ಅದರೊಡನೆ ಕತೆಯ ಪರಿಸರವನ್ನೂ ಕಥಿಸುವುದಲ್ಲದೆ ದೇಶ ಕಾಲಗಳ ಒಂದು ಸಮಗ್ರ ಗ್ರಹಿಕೆ ಸಾಧ್ಯವಾಗುವಂತೆ ಮಾಡುತ್ತಾರೆ. ಈ ಕಾದಂಬರಿ ಸ್ವಾತಂತ್ರ್ಯ ಪೂರ್ವದ ಆರ್ಥಿಕ ಕಾರ್ಪಣ್ಯ ಮತ್ತು ಸ್ವಾತಂತ್ರ್ಯ ಹರಣದ ಪರಿಪ್ರೇಕ್ಷೆಯಲ್ಲಿ ಪ್ರಾರಂಭವಾಗಿ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಂಬಂಧಗಳು ಪಡೆದ ಹೊಸ ವಿನ್ಯಾಸಗಳನ್ನು, ಹೊಸ ಅವಕಾಶಗಳನ್ನು ಅದ್ಭುತವಾಗಿ ತೋರಿಸುತ್ತದೆ. ಕಡುಕಾರ್ಪಣ್ಯದಲ್ಲಿದ್ದ ಕುಯಿರ ನಾಯಕ ಎಂಬ ಗೇಣಿದಾರ ಬಡತನದಿಂದ ಜರ್ಝರಿತನಾಗಿ ಕುಟುಂಬ ಸಹಿತ ರಾತೋರಾತ್ರಿ ಧಣಿಗಳ ಹಿಡಿತದಿಂದ ಪಾರಾಗಿ ನದಿ ದಾಟಿ ಬೇರೊಂದು ಗ್ರಾಮದಲ್ಲಿ ವೆಂಕಣ್ಣಯ್ಯನ ಚಾಲಗೇಣಿದಾರನಾಗಿ ನೆಲೆಯಾಗುತ್ತಾನೆ. ತಲೆಮಾರು ಕಳೆದಾಗ ದೇಶ ಬದಲಾಗಿ, ವ್ಯವಸ್ಥೆ ಬದಲಾಗಿ, ಸಂಬಂಧಗಳು ಬದಲಾಗಿ ಹೊಸವಿನ್ಯಾಸಗಳು ಮೂಡುತ್ತವೆ. ಭೂಮಸೂದೆಯಲ್ಲಿ ವೆಂಕಣ್ಣಯ್ಯನ ಕುಟುಂಬ ಭೂಮಿಯಿಂದ ಹೊರಬಿದ್ದು ನಗರದಲ್ಲಿ ಬದುಕು ಕಟ್ಟಿಕೊಂಡರೆ ಕುಯಿರ ನಾಯಕನ ಪೀಳಿಗೆ ಭೂಮಿ ಹಕ್ಕನ್ನು ಪಡೆದು ದೇಶದ ಗಣ್ಯ ಪ್ರಜೆಗಳಾಗುತ್ತಾರೆ. ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಯೊಬ್ಬ ಸಿದ್ಧ ನಾಯಕನ ಮನೆಗೆ ಬಂದು ಖಾತೆ ತೆರೆಯಿಸಿ ಮನೆ ಕಟ್ಟಲು ಸಾಲ ಕೊಡಲು ಮುಂದಾಗುವುದು ಈ ಸಕಾರಾತ್ಮಕ ಪರಿವರ್ತನೆಯ ಸಾಂಕೇತಿಕ ಕಥನವಾಗಿದೆ. ಭಾಷೆಯ ಮೂಲಕ ಈ ಜಗತ್ತು ನಮ್ಮೆದುರು ಅದ್ಭುತವಾಗಿ ಅನಾವರಣವಾಗುವುದು ಶಶಿಧರ ಹಾಲಾಡಿಯವರ ಕತೆಗಾರಿಕೆಯ ಶಕ್ತಿಗೆ ದ್ಯೋತಕವಾಗಿದೆ.
-ಡಾ. ಬಿ. ಜನಾರ್ದನ ಭಟ್
ಶಶಿಧರ ಹಾಲಾಡಿಯವರ ಮೊದಲ ಎರಡು ಕಾದಂಬರಿಗಳ ಕಥನ ಕೇಂದ್ರ ಅಖಿಲ ಭಾರತ (ಕಾದಂಬರಿ - 'ಕಾಲಕೋಶ') ಮತ್ತು ಬಯಲು ಸೀಮೆ (ಕಾದಂಬರಿ – 'ಅಜ್ಜಿ') ಆಗಿದ್ದವು. ಈ ಮೂರನೆಯ ಕಾದಂಬರಿಯ ('ನದಿ ದಾಟಿ ಬಂದವರು') ಕಥನ ಕೇಂದ್ರ ಕರಾವಳಿಯ ಒಳನಾಡಿನ ಹಳ್ಳಿಗಾಡು. ಕುವೆಂಪು ಅವರ ಮಲೆನಾಡು ಮತ್ತು ಕಾರಂತರ 'ಮರಳಿ ಮಣ್ಣಿಗೆ'ಯ ಕರಾವಳಿ – ಈ ಎರಡು ಸೀಮೆಗಳ ನಡುವಿನ, ಕರಾವಳಿಯ ಒಳಭಾಗದ ಕಾಡು, ಗುಡ್ಡ, ಗದ್ದೆ, ಹೊಳೆಗಳ ದಟ್ಟ ಪರಿಸರದಲ್ಲಿ ಬದುಕಿದ್ದವರ ಬದುಕಿನೊಳಗೆ ಲೇಖಕರು ಈ ಕಾದಂಬರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ.
ಹಾಲಾಡಿಯವರು ಕತೆ ಹೇಳುವಾಗ ಅದರೊಡನೆ ಕತೆಯ ಪರಿಸರವನ್ನೂ ಕಥಿಸುವುದಲ್ಲದೆ ದೇಶ ಕಾಲಗಳ ಒಂದು ಸಮಗ್ರ ಗ್ರಹಿಕೆ ಸಾಧ್ಯವಾಗುವಂತೆ ಮಾಡುತ್ತಾರೆ. ಈ ಕಾದಂಬರಿ ಸ್ವಾತಂತ್ರ್ಯ ಪೂರ್ವದ ಆರ್ಥಿಕ ಕಾರ್ಪಣ್ಯ ಮತ್ತು ಸ್ವಾತಂತ್ರ್ಯ ಹರಣದ ಪರಿಪ್ರೇಕ್ಷೆಯಲ್ಲಿ ಪ್ರಾರಂಭವಾಗಿ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಂಬಂಧಗಳು ಪಡೆದ ಹೊಸ ವಿನ್ಯಾಸಗಳನ್ನು, ಹೊಸ ಅವಕಾಶಗಳನ್ನು ಅದ್ಭುತವಾಗಿ ತೋರಿಸುತ್ತದೆ. ಕಡುಕಾರ್ಪಣ್ಯದಲ್ಲಿದ್ದ ಕುಯಿರ ನಾಯಕ ಎಂಬ ಗೇಣಿದಾರ ಬಡತನದಿಂದ ಜರ್ಝರಿತನಾಗಿ ಕುಟುಂಬ ಸಹಿತ ರಾತೋರಾತ್ರಿ ಧಣಿಗಳ ಹಿಡಿತದಿಂದ ಪಾರಾಗಿ ನದಿ ದಾಟಿ ಬೇರೊಂದು ಗ್ರಾಮದಲ್ಲಿ ವೆಂಕಣ್ಣಯ್ಯನ ಚಾಲಗೇಣಿದಾರನಾಗಿ ನೆಲೆಯಾಗುತ್ತಾನೆ. ತಲೆಮಾರು ಕಳೆದಾಗ ದೇಶ ಬದಲಾಗಿ, ವ್ಯವಸ್ಥೆ ಬದಲಾಗಿ, ಸಂಬಂಧಗಳು ಬದಲಾಗಿ ಹೊಸವಿನ್ಯಾಸಗಳು ಮೂಡುತ್ತವೆ. ಭೂಮಸೂದೆಯಲ್ಲಿ ವೆಂಕಣ್ಣಯ್ಯನ ಕುಟುಂಬ ಭೂಮಿಯಿಂದ ಹೊರಬಿದ್ದು ನಗರದಲ್ಲಿ ಬದುಕು ಕಟ್ಟಿಕೊಂಡರೆ ಕುಯಿರ ನಾಯಕನ ಪೀಳಿಗೆ ಭೂಮಿ ಹಕ್ಕನ್ನು ಪಡೆದು ದೇಶದ ಗಣ್ಯ ಪ್ರಜೆಗಳಾಗುತ್ತಾರೆ. ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಯೊಬ್ಬ ಸಿದ್ಧ ನಾಯಕನ ಮನೆಗೆ ಬಂದು ಖಾತೆ ತೆರೆಯಿಸಿ ಮನೆ ಕಟ್ಟಲು ಸಾಲ ಕೊಡಲು ಮುಂದಾಗುವುದು ಈ ಸಕಾರಾತ್ಮಕ ಪರಿವರ್ತನೆಯ ಸಾಂಕೇತಿಕ ಕಥನವಾಗಿದೆ. ಭಾಷೆಯ ಮೂಲಕ ಈ ಜಗತ್ತು ನಮ್ಮೆದುರು ಅದ್ಭುತವಾಗಿ ಅನಾವರಣವಾಗುವುದು ಶಶಿಧರ ಹಾಲಾಡಿಯವರ ಕತೆಗಾರಿಕೆಯ ಶಕ್ತಿಗೆ ದ್ಯೋತಕವಾಗಿದೆ.
-ಡಾ. ಬಿ. ಜನಾರ್ದನ ಭಟ್
Description
ಶಶಿಧರ ಹಾಲಾಡಿಯವರ ಮೊದಲ ಎರಡು ಕಾದಂಬರಿಗಳ ಕಥನ ಕೇಂದ್ರ ಅಖಿಲ ಭಾರತ (ಕಾದಂಬರಿ - 'ಕಾಲಕೋಶ') ಮತ್ತು ಬಯಲು ಸೀಮೆ (ಕಾದಂಬರಿ – 'ಅಜ್ಜಿ') ಆಗಿದ್ದವು. ಈ ಮೂರನೆಯ ಕಾದಂಬರಿಯ ('ನದಿ ದಾಟಿ ಬಂದವರು') ಕಥನ ಕೇಂದ್ರ ಕರಾವಳಿಯ ಒಳನಾಡಿನ ಹಳ್ಳಿಗಾಡು. ಕುವೆಂಪು ಅವರ ಮಲೆನಾಡು ಮತ್ತು ಕಾರಂತರ 'ಮರಳಿ ಮಣ್ಣಿಗೆ'ಯ ಕರಾವಳಿ – ಈ ಎರಡು ಸೀಮೆಗಳ ನಡುವಿನ, ಕರಾವಳಿಯ ಒಳಭಾಗದ ಕಾಡು, ಗುಡ್ಡ, ಗದ್ದೆ, ಹೊಳೆಗಳ ದಟ್ಟ ಪರಿಸರದಲ್ಲಿ ಬದುಕಿದ್ದವರ ಬದುಕಿನೊಳಗೆ ಲೇಖಕರು ಈ ಕಾದಂಬರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ.
ಹಾಲಾಡಿಯವರು ಕತೆ ಹೇಳುವಾಗ ಅದರೊಡನೆ ಕತೆಯ ಪರಿಸರವನ್ನೂ ಕಥಿಸುವುದಲ್ಲದೆ ದೇಶ ಕಾಲಗಳ ಒಂದು ಸಮಗ್ರ ಗ್ರಹಿಕೆ ಸಾಧ್ಯವಾಗುವಂತೆ ಮಾಡುತ್ತಾರೆ. ಈ ಕಾದಂಬರಿ ಸ್ವಾತಂತ್ರ್ಯ ಪೂರ್ವದ ಆರ್ಥಿಕ ಕಾರ್ಪಣ್ಯ ಮತ್ತು ಸ್ವಾತಂತ್ರ್ಯ ಹರಣದ ಪರಿಪ್ರೇಕ್ಷೆಯಲ್ಲಿ ಪ್ರಾರಂಭವಾಗಿ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಂಬಂಧಗಳು ಪಡೆದ ಹೊಸ ವಿನ್ಯಾಸಗಳನ್ನು, ಹೊಸ ಅವಕಾಶಗಳನ್ನು ಅದ್ಭುತವಾಗಿ ತೋರಿಸುತ್ತದೆ. ಕಡುಕಾರ್ಪಣ್ಯದಲ್ಲಿದ್ದ ಕುಯಿರ ನಾಯಕ ಎಂಬ ಗೇಣಿದಾರ ಬಡತನದಿಂದ ಜರ್ಝರಿತನಾಗಿ ಕುಟುಂಬ ಸಹಿತ ರಾತೋರಾತ್ರಿ ಧಣಿಗಳ ಹಿಡಿತದಿಂದ ಪಾರಾಗಿ ನದಿ ದಾಟಿ ಬೇರೊಂದು ಗ್ರಾಮದಲ್ಲಿ ವೆಂಕಣ್ಣಯ್ಯನ ಚಾಲಗೇಣಿದಾರನಾಗಿ ನೆಲೆಯಾಗುತ್ತಾನೆ. ತಲೆಮಾರು ಕಳೆದಾಗ ದೇಶ ಬದಲಾಗಿ, ವ್ಯವಸ್ಥೆ ಬದಲಾಗಿ, ಸಂಬಂಧಗಳು ಬದಲಾಗಿ ಹೊಸವಿನ್ಯಾಸಗಳು ಮೂಡುತ್ತವೆ. ಭೂಮಸೂದೆಯಲ್ಲಿ ವೆಂಕಣ್ಣಯ್ಯನ ಕುಟುಂಬ ಭೂಮಿಯಿಂದ ಹೊರಬಿದ್ದು ನಗರದಲ್ಲಿ ಬದುಕು ಕಟ್ಟಿಕೊಂಡರೆ ಕುಯಿರ ನಾಯಕನ ಪೀಳಿಗೆ ಭೂಮಿ ಹಕ್ಕನ್ನು ಪಡೆದು ದೇಶದ ಗಣ್ಯ ಪ್ರಜೆಗಳಾಗುತ್ತಾರೆ. ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಯೊಬ್ಬ ಸಿದ್ಧ ನಾಯಕನ ಮನೆಗೆ ಬಂದು ಖಾತೆ ತೆರೆಯಿಸಿ ಮನೆ ಕಟ್ಟಲು ಸಾಲ ಕೊಡಲು ಮುಂದಾಗುವುದು ಈ ಸಕಾರಾತ್ಮಕ ಪರಿವರ್ತನೆಯ ಸಾಂಕೇತಿಕ ಕಥನವಾಗಿದೆ. ಭಾಷೆಯ ಮೂಲಕ ಈ ಜಗತ್ತು ನಮ್ಮೆದುರು ಅದ್ಭುತವಾಗಿ ಅನಾವರಣವಾಗುವುದು ಶಶಿಧರ ಹಾಲಾಡಿಯವರ ಕತೆಗಾರಿಕೆಯ ಶಕ್ತಿಗೆ ದ್ಯೋತಕವಾಗಿದೆ.
-ಡಾ. ಬಿ. ಜನಾರ್ದನ ಭಟ್











