HomeStore

ಮೀನಾಕ್ಷಿಯ ಸೌಗಂಧ

Product image 1

ಮೀನಾಕ್ಷಿಯ ಸೌಗಂಧ

ಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ತಲಸ್ಪರ್ಶಿಯಾಗಿ ಶೋಧಿಸುವ ಜಾಯಮಾನ ಬಿ.ಜಿ.ಎಲ್, ಸ್ವಾಮಿಯವರದು, ಪ್ರಧಾನ ಅಧ್ಯಯನ

ಕ್ಷೇತ್ರವಾದ ಸಸ್ಯವಿಜ್ಞಾನದಲ್ಲಂತೂ ಅವರದು ಅಚ್ಚಳಿಯದ ಹೆಜ್ಜೆಗುರುತು. ಮುನ್ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಅಂತರರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಹೆಗ್ಗಳಿಕೆ ಇವರದು. ಸಸ್ಯವಿಜ್ಞಾನದ ಸಂಶೋಧಕರು ಕೆಲವು ಸಸ್ಯ ಪ್ರಭೇದಗಳಿಗೆ ಸ್ವಾಮಿಯವರ ಹೆಸರನ್ನು ನೀಡಿ ಸ್ಮರಿಸಿದ್ದಾರೆ. ಕನ್ನಡದಲ್ಲಿ ಅವರು ಮಾಡಿರುವ ಕೆಲಸ ಅಷ್ಟೇ ಅಗಾಧವಾದುದು. ಸೆಂಟ್ರಲ್ ಕಾಲೇಜಿನ ದಿನಗಳ ನೆನಪನ್ನು ಹಸಿರಾಗಿಸುವ 'ಪಂಚಕಲಶಗೋಪರ', ಅಧಿಕಾರದ ಕೊರಳು ಪಟ್ಟಿಯನ್ನು ಕಟ್ಟಿಕೊಂಡವರೊಂದಿಗೆ ಹೆಣಗಾಡಿ ಪಡೆದ ಅನುಭವಗಳನ್ನು ನಿರೂಪಿಸುವ 'ಕಾಲೇಜುರಂಗ' ಮತ್ತು 'ಕಾಲೇಜುತರಂಗ', ಸಸ್ಯವಿಜ್ಞಾನದ ವಿವರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುವ 'ದೌರ್ಗಂಧಿಕಾಪಹರಣ', 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟ 'ಹಸುರು ಹೊನ್ನು ಮುಂತಾದ ಕೃತಿಗಳು ಸ್ವಾಮಿಯವರ ಪ್ರತಿಭೆಗೆ ದ್ಯೋತಕವಾಗಿದೆ. ಈ ಕೃತಿಗಳು ಕನ್ನಡಕ್ಕೆ ಹೊಸ ಪರಿಭಾಷೆಯನ್ನು ತಂದುಕೊಟ್ಟಿವೆ. ಈಗಲೂ ಅವುಗಳಿಗೆ ಅಪಾರ ಬೇಡಿಕೆ ಇದೆ.

ಕನ್ನಡ ನುಡಿ, ಪ್ರಬುದ್ಧ ಕರ್ನಾಟಕ, ಜೀವನ, ಕೊರವಂಜಿ, ಮಾನವಿಕ ಕರ್ಣಾಟಕ, ಸಾಧನೆ, ಪ್ರಜಾವಾಣಿ, ಜನಪ್ರಿಯ ವಿಜ್ಞಾನ ಮುಂತಾದ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಸ್ವಾಮಿಯವರ ವಿವಿಧ ಬಗೆಯ ಕನ್ನಡ ಬರಹಗಳು ಪ್ರಕಟವಾಗಿದ್ದವು. ಈ ಪೈಕಿ ಕೆಲವು ಲೇಖನಗಳು ಸಸ್ಯಮರಾಣ ಮತ್ತು ಸಸ್ಯಜೀವಿ – ಪ್ರಾಣಿಜೀವಿ ಎಂಬ ಸಂಕಲನಗಳಲ್ಲಿ ಪ್ರಕಟವಾಗಿವೆ. ಉಳಿದವನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಮೂಲಕ ಅವರ ಜನ್ಮಶತಾಬ್ದಯ ಸಂದರ್ಭದಲ್ಲಿ ಸ್ವಾಮಿಯವರಿಗೆ ಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಸಮಾನ ಮನಸ್ಕರು ನಿರ್ಧರಿಸಿದುದರ ಫಲಶ್ರುತಿ ನಿಮ್ಮ ಕೈಯಲ್ಲಿದೆ.
ಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ತಲಸ್ಪರ್ಶಿಯಾಗಿ ಶೋಧಿಸುವ ಜಾಯಮಾನ ಬಿ.ಜಿ.ಎಲ್, ಸ್ವಾಮಿಯವರದು, ಪ್ರಧಾನ ಅಧ್ಯಯನ

ಕ್ಷೇತ್ರವಾದ ಸಸ್ಯವಿಜ್ಞಾನದಲ್ಲಂತೂ ಅವರದು ಅಚ್ಚಳಿಯದ ಹೆಜ್ಜೆಗುರುತು. ಮುನ್ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಅಂತರರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಹೆಗ್ಗಳಿಕೆ ಇವರದು. ಸಸ್ಯವಿಜ್ಞಾನದ ಸಂಶೋಧಕರು ಕೆಲವು ಸಸ್ಯ ಪ್ರಭೇದಗಳಿಗೆ ಸ್ವಾಮಿಯವರ ಹೆಸರನ್ನು ನೀಡಿ ಸ್ಮರಿಸಿದ್ದಾರೆ. ಕನ್ನಡದಲ್ಲಿ ಅವರು ಮಾಡಿರುವ ಕೆಲಸ ಅಷ್ಟೇ ಅಗಾಧವಾದುದು. ಸೆಂಟ್ರಲ್ ಕಾಲೇಜಿನ ದಿನಗಳ ನೆನಪನ್ನು ಹಸಿರಾಗಿಸುವ 'ಪಂಚಕಲಶಗೋಪರ', ಅಧಿಕಾರದ ಕೊರಳು ಪಟ್ಟಿಯನ್ನು ಕಟ್ಟಿಕೊಂಡವರೊಂದಿಗೆ ಹೆಣಗಾಡಿ ಪಡೆದ ಅನುಭವಗಳನ್ನು ನಿರೂಪಿಸುವ 'ಕಾಲೇಜುರಂಗ' ಮತ್ತು 'ಕಾಲೇಜುತರಂಗ', ಸಸ್ಯವಿಜ್ಞಾನದ ವಿವರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುವ 'ದೌರ್ಗಂಧಿಕಾಪಹರಣ', 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟ 'ಹಸುರು ಹೊನ್ನು ಮುಂತಾದ ಕೃತಿಗಳು ಸ್ವಾಮಿಯವರ ಪ್ರತಿಭೆಗೆ ದ್ಯೋತಕವಾಗಿದೆ. ಈ ಕೃತಿಗಳು ಕನ್ನಡಕ್ಕೆ ಹೊಸ ಪರಿಭಾಷೆಯನ್ನು ತಂದುಕೊಟ್ಟಿವೆ. ಈಗಲೂ ಅವುಗಳಿಗೆ ಅಪಾರ ಬೇಡಿಕೆ ಇದೆ.

ಕನ್ನಡ ನುಡಿ, ಪ್ರಬುದ್ಧ ಕರ್ನಾಟಕ, ಜೀವನ, ಕೊರವಂಜಿ, ಮಾನವಿಕ ಕರ್ಣಾಟಕ, ಸಾಧನೆ, ಪ್ರಜಾವಾಣಿ, ಜನಪ್ರಿಯ ವಿಜ್ಞಾನ ಮುಂತಾದ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಸ್ವಾಮಿಯವರ ವಿವಿಧ ಬಗೆಯ ಕನ್ನಡ ಬರಹಗಳು ಪ್ರಕಟವಾಗಿದ್ದವು. ಈ ಪೈಕಿ ಕೆಲವು ಲೇಖನಗಳು ಸಸ್ಯಮರಾಣ ಮತ್ತು ಸಸ್ಯಜೀವಿ – ಪ್ರಾಣಿಜೀವಿ ಎಂಬ ಸಂಕಲನಗಳಲ್ಲಿ ಪ್ರಕಟವಾಗಿವೆ. ಉಳಿದವನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಮೂಲಕ ಅವರ ಜನ್ಮಶತಾಬ್ದಯ ಸಂದರ್ಭದಲ್ಲಿ ಸ್ವಾಮಿಯವರಿಗೆ ಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಸಮಾನ ಮನಸ್ಕರು ನಿರ್ಧರಿಸಿದುದರ ಫಲಶ್ರುತಿ ನಿಮ್ಮ ಕೈಯಲ್ಲಿದೆ.
$1.95
ಮೀನಾಕ್ಷಿಯ ಸೌಗಂಧ
$1.95

Description

ಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ತಲಸ್ಪರ್ಶಿಯಾಗಿ ಶೋಧಿಸುವ ಜಾಯಮಾನ ಬಿ.ಜಿ.ಎಲ್, ಸ್ವಾಮಿಯವರದು, ಪ್ರಧಾನ ಅಧ್ಯಯನ

ಕ್ಷೇತ್ರವಾದ ಸಸ್ಯವಿಜ್ಞಾನದಲ್ಲಂತೂ ಅವರದು ಅಚ್ಚಳಿಯದ ಹೆಜ್ಜೆಗುರುತು. ಮುನ್ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಅಂತರರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಹೆಗ್ಗಳಿಕೆ ಇವರದು. ಸಸ್ಯವಿಜ್ಞಾನದ ಸಂಶೋಧಕರು ಕೆಲವು ಸಸ್ಯ ಪ್ರಭೇದಗಳಿಗೆ ಸ್ವಾಮಿಯವರ ಹೆಸರನ್ನು ನೀಡಿ ಸ್ಮರಿಸಿದ್ದಾರೆ. ಕನ್ನಡದಲ್ಲಿ ಅವರು ಮಾಡಿರುವ ಕೆಲಸ ಅಷ್ಟೇ ಅಗಾಧವಾದುದು. ಸೆಂಟ್ರಲ್ ಕಾಲೇಜಿನ ದಿನಗಳ ನೆನಪನ್ನು ಹಸಿರಾಗಿಸುವ 'ಪಂಚಕಲಶಗೋಪರ', ಅಧಿಕಾರದ ಕೊರಳು ಪಟ್ಟಿಯನ್ನು ಕಟ್ಟಿಕೊಂಡವರೊಂದಿಗೆ ಹೆಣಗಾಡಿ ಪಡೆದ ಅನುಭವಗಳನ್ನು ನಿರೂಪಿಸುವ 'ಕಾಲೇಜುರಂಗ' ಮತ್ತು 'ಕಾಲೇಜುತರಂಗ', ಸಸ್ಯವಿಜ್ಞಾನದ ವಿವರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುವ 'ದೌರ್ಗಂಧಿಕಾಪಹರಣ', 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟ 'ಹಸುರು ಹೊನ್ನು ಮುಂತಾದ ಕೃತಿಗಳು ಸ್ವಾಮಿಯವರ ಪ್ರತಿಭೆಗೆ ದ್ಯೋತಕವಾಗಿದೆ. ಈ ಕೃತಿಗಳು ಕನ್ನಡಕ್ಕೆ ಹೊಸ ಪರಿಭಾಷೆಯನ್ನು ತಂದುಕೊಟ್ಟಿವೆ. ಈಗಲೂ ಅವುಗಳಿಗೆ ಅಪಾರ ಬೇಡಿಕೆ ಇದೆ.

ಕನ್ನಡ ನುಡಿ, ಪ್ರಬುದ್ಧ ಕರ್ನಾಟಕ, ಜೀವನ, ಕೊರವಂಜಿ, ಮಾನವಿಕ ಕರ್ಣಾಟಕ, ಸಾಧನೆ, ಪ್ರಜಾವಾಣಿ, ಜನಪ್ರಿಯ ವಿಜ್ಞಾನ ಮುಂತಾದ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಸ್ವಾಮಿಯವರ ವಿವಿಧ ಬಗೆಯ ಕನ್ನಡ ಬರಹಗಳು ಪ್ರಕಟವಾಗಿದ್ದವು. ಈ ಪೈಕಿ ಕೆಲವು ಲೇಖನಗಳು ಸಸ್ಯಮರಾಣ ಮತ್ತು ಸಸ್ಯಜೀವಿ – ಪ್ರಾಣಿಜೀವಿ ಎಂಬ ಸಂಕಲನಗಳಲ್ಲಿ ಪ್ರಕಟವಾಗಿವೆ. ಉಳಿದವನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಮೂಲಕ ಅವರ ಜನ್ಮಶತಾಬ್ದಯ ಸಂದರ್ಭದಲ್ಲಿ ಸ್ವಾಮಿಯವರಿಗೆ ಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಸಮಾನ ಮನಸ್ಕರು ನಿರ್ಧರಿಸಿದುದರ ಫಲಶ್ರುತಿ ನಿಮ್ಮ ಕೈಯಲ್ಲಿದೆ.
ಮೀನಾಕ್ಷಿಯ ಸೌಗಂಧ | Harivu Books