
ಕವಿ ಶ್ರೇಷ್ಟ ಕನಕದಾಸರು
ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು ೫೦೦ ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರು ಮತ್ತು ಪುರಂದರದಾಸರಂತಹ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು-ಕೀಳು ಎಂಬ ಭಾವನೆ ಮತ್ತು ಜಾತಿ-ಮತಗಳ ಸಂಕುಚಿತ ಸಿದ್ಧಾಂತಗಳು ಪಕ್ಕಕ್ಕೆ ಸರಿದವು. ದೈವಸ್ತುತಿಯೇ ಪ್ರಮುಖವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧ್ರುವತಾರೆಯಂತೆ ಅವತರಿಸಿದ ಕನಕದಾಸರು, ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ ಹಾಗೂ ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದ್ದಾರೆ.
ಕನಕರು ಆದಿಗುರು ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿರುವ ಅದ್ವೈತ ತತ್ವಸಾರವನ್ನನುಸರಿಸಿ ನಾನು-ನನ್ನದೆಂಬ ಮೋಹ, ಪರಬ್ರಹ್ಮ ಹಾಗೂ ಬದುಕಿನ ಜೀವನಸಾರವನ್ನು ಬೋಧಿಸಿ 'ಮನುಜಕುಲ ಒಂದೇ' ಎಂಬ ತತ್ವ ಸಾರಿದವರು. ಐದು ಶತಮಾನಗಳ ಹಿಂದೆಯೇ ಒಬ್ಬ ಹರಿದಾಸರಾಗಿ, ಆಧ್ಯಾತ್ಮಿಕ ಸಂತಕವಿಯಾಗಿ ಕನಕದಾಸರು ಮಾನವನು ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿಹೇಳಿದವರು. ಪ್ರಸ್ತುತ ಈ ಕೃತಿಯಲ್ಲಿ ಕನ್ನಡದ ಶ್ರೇಷ್ಠ ಕೀರ್ತನಕಾರರಲ್ಲಿ ಒಬ್ಬರಾದ ಕನಕದಾಸರ ಜೀವನ ಹಾಗೂ ಸಾಧನೆಯ ಕುರಿತು ಮಕ್ಕಳಿಗೆ ಮತ್ತು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ನಿರೂಪಿಸಲಾಗಿದೆ.
ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು ೫೦೦ ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರು ಮತ್ತು ಪುರಂದರದಾಸರಂತಹ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು-ಕೀಳು ಎಂಬ ಭಾವನೆ ಮತ್ತು ಜಾತಿ-ಮತಗಳ ಸಂಕುಚಿತ ಸಿದ್ಧಾಂತಗಳು ಪಕ್ಕಕ್ಕೆ ಸರಿದವು. ದೈವಸ್ತುತಿಯೇ ಪ್ರಮುಖವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧ್ರುವತಾರೆಯಂತೆ ಅವತರಿಸಿದ ಕನಕದಾಸರು, ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ ಹಾಗೂ ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದ್ದಾರೆ.
ಕನಕರು ಆದಿಗುರು ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿರುವ ಅದ್ವೈತ ತತ್ವಸಾರವನ್ನನುಸರಿಸಿ ನಾನು-ನನ್ನದೆಂಬ ಮೋಹ, ಪರಬ್ರಹ್ಮ ಹಾಗೂ ಬದುಕಿನ ಜೀವನಸಾರವನ್ನು ಬೋಧಿಸಿ 'ಮನುಜಕುಲ ಒಂದೇ' ಎಂಬ ತತ್ವ ಸಾರಿದವರು. ಐದು ಶತಮಾನಗಳ ಹಿಂದೆಯೇ ಒಬ್ಬ ಹರಿದಾಸರಾಗಿ, ಆಧ್ಯಾತ್ಮಿಕ ಸಂತಕವಿಯಾಗಿ ಕನಕದಾಸರು ಮಾನವನು ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿಹೇಳಿದವರು. ಪ್ರಸ್ತುತ ಈ ಕೃತಿಯಲ್ಲಿ ಕನ್ನಡದ ಶ್ರೇಷ್ಠ ಕೀರ್ತನಕಾರರಲ್ಲಿ ಒಬ್ಬರಾದ ಕನಕದಾಸರ ಜೀವನ ಹಾಗೂ ಸಾಧನೆಯ ಕುರಿತು ಮಕ್ಕಳಿಗೆ ಮತ್ತು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ನಿರೂಪಿಸಲಾಗಿದೆ.
Description
ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು ೫೦೦ ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರು ಮತ್ತು ಪುರಂದರದಾಸರಂತಹ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು-ಕೀಳು ಎಂಬ ಭಾವನೆ ಮತ್ತು ಜಾತಿ-ಮತಗಳ ಸಂಕುಚಿತ ಸಿದ್ಧಾಂತಗಳು ಪಕ್ಕಕ್ಕೆ ಸರಿದವು. ದೈವಸ್ತುತಿಯೇ ಪ್ರಮುಖವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧ್ರುವತಾರೆಯಂತೆ ಅವತರಿಸಿದ ಕನಕದಾಸರು, ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ ಹಾಗೂ ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದ್ದಾರೆ.
ಕನಕರು ಆದಿಗುರು ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿರುವ ಅದ್ವೈತ ತತ್ವಸಾರವನ್ನನುಸರಿಸಿ ನಾನು-ನನ್ನದೆಂಬ ಮೋಹ, ಪರಬ್ರಹ್ಮ ಹಾಗೂ ಬದುಕಿನ ಜೀವನಸಾರವನ್ನು ಬೋಧಿಸಿ 'ಮನುಜಕುಲ ಒಂದೇ' ಎಂಬ ತತ್ವ ಸಾರಿದವರು. ಐದು ಶತಮಾನಗಳ ಹಿಂದೆಯೇ ಒಬ್ಬ ಹರಿದಾಸರಾಗಿ, ಆಧ್ಯಾತ್ಮಿಕ ಸಂತಕವಿಯಾಗಿ ಕನಕದಾಸರು ಮಾನವನು ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿಹೇಳಿದವರು. ಪ್ರಸ್ತುತ ಈ ಕೃತಿಯಲ್ಲಿ ಕನ್ನಡದ ಶ್ರೇಷ್ಠ ಕೀರ್ತನಕಾರರಲ್ಲಿ ಒಬ್ಬರಾದ ಕನಕದಾಸರ ಜೀವನ ಹಾಗೂ ಸಾಧನೆಯ ಕುರಿತು ಮಕ್ಕಳಿಗೆ ಮತ್ತು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ನಿರೂಪಿಸಲಾಗಿದೆ.










