HomeStore

ಕಣಜ

Product image 1
1 / 2

ಕಣಜ

ಭಾರತದ ಗ್ರಾಮೀಣ ಬದುಕಿನ ಬೇರಿಗೆ ಹತ್ತಿರುವ ರೋಗ ಮೂಲವನ್ನು ಹಾಗೂ ಮಣ್ಣಿನ ಗಾಯಗಳನ್ನು ಕುರಿತು ಜೀವ ತಲ್ಲಣಿಸುವಂತೆ ಬರೆದವರು ಬೆಸರಗಹಳ್ಳಿ ರಾಮಣ್ಣನವರು.

ವೈದ್ಯರಾಗಿದ್ದೂ ಮನುಷ್ಯ ಸಂಬಂಧಗಳ ತಾಳಿಕೆಯ ಗುಣವನ್ನು ಹೇಗೋ ಹಾಗೇ ಪ್ರಕೃತಿಯ ಸಂಗೋಪನಾ ಸಾಮರ್ಥ್ಯವನ್ನು, ಕೇಡಿನ ಬಲವನ್ನು ಒರೆಗಚ್ಚುವಂತೆ ಕಥೆ ಕಟ್ಟಿದವರು. ಅವರ ನಿರೂಪಣೆಗಳು ತೀವ್ರವಾದ ನೈತಿಕ ಸಿಟ್ಟಿನಿಂದ ಕುದಿಯುತ್ತವೆ. ರಾಮಣ್ಣನವರ ಕಥನಲೋಕದಲ್ಲಿನ ವರ್ತಮಾನದ ಕಾಲದೇಶಗಳು, ಮನುಷ್ಯ ಬದುಕಿನ ವಿವಿಧ ಆಯಾಮಗಳು, ಜೀವಸಂಕುಲಗಳ ಸಂಭ್ರಮ-ಸಂಕಟಗಳು ಸಾರ್ವಕಾಲಿಕವಾಗುವ ಜೀವಗುಣವನ್ನು ಪಡೆದುಕೊಂಡಿವೆ.

ರಾಮಣ್ಣನವರ ಕಥೆಗಳೆಂದರೆ ಪ್ರೀತಿಸುವ, ಕೋಪಗೊಳ್ಳುವ, ನೊಂದುಕೊಳ್ಳುವ, ನಿಷ್ಟೂರವಾಗಿ ವರ್ತಿಸುವ, ನ್ಯಾಯಪರವಾಗಿ

ನಿಲ್ಲುವ ಅಂತ:ಕರಣ ಕಕ್ಕುಲಾತಿಗಳಿಂದಲೂ, ಅಷ್ಟೇ ನಿರ್ಮೋಹದಿಂದಲೂ ಕಟ್ಟಲ್ಪಟ್ಟ ರಚನೆಗಳಾಗಿವೆ. ಈ ಕಥೆಗಳು ಓದುಗರನ್ನು ಕೇಳುಗರನ್ನಾಗಿಸಿ ಜೀವಜಿನುಗುವಂತೆ ಮಾಡುವ ಮಾಯಸ್ಪರ್ಶವನ್ನು ಪಡೆದುಕೊಂಡಿವೆ. ಕನ್ನಡ ಭಾಷೆಯ ಸಂವೇದನಾ ಸಾಮರ್ಥ್ಯವನ್ನು ನಿರಂತರವಾಗಿ ಹಿಗ್ಗಿಸುವ ಸಾವಯವ ಲಕ್ಷಣವುಳ್ಳ ಕಥನ ಕ್ರಮವಿದು. ಕನ್ನಡದ ಮುಂಬರುವ ತಲೆಮಾರುಗಳು ಕಲಿಯಲೇಬೇಕಿರುವ ಸಂಸ್ಕೃತಿಯ ಪಾಠಗಳನ್ನು ರಾಮಣ್ಣ ಅವರ ಕಥೆಗಳು ತಮ್ಮ ಒಡಲೊಳಗೆ ಹುದುಗಿಸಿಕೊಂಡಿವೆ.

-ಕೆ.ವೈ. ನಾರಾಯಣಸ್ವಾಮಿ 

ಭಾರತದ ಗ್ರಾಮೀಣ ಬದುಕಿನ ಬೇರಿಗೆ ಹತ್ತಿರುವ ರೋಗ ಮೂಲವನ್ನು ಹಾಗೂ ಮಣ್ಣಿನ ಗಾಯಗಳನ್ನು ಕುರಿತು ಜೀವ ತಲ್ಲಣಿಸುವಂತೆ ಬರೆದವರು ಬೆಸರಗಹಳ್ಳಿ ರಾಮಣ್ಣನವರು.

ವೈದ್ಯರಾಗಿದ್ದೂ ಮನುಷ್ಯ ಸಂಬಂಧಗಳ ತಾಳಿಕೆಯ ಗುಣವನ್ನು ಹೇಗೋ ಹಾಗೇ ಪ್ರಕೃತಿಯ ಸಂಗೋಪನಾ ಸಾಮರ್ಥ್ಯವನ್ನು, ಕೇಡಿನ ಬಲವನ್ನು ಒರೆಗಚ್ಚುವಂತೆ ಕಥೆ ಕಟ್ಟಿದವರು. ಅವರ ನಿರೂಪಣೆಗಳು ತೀವ್ರವಾದ ನೈತಿಕ ಸಿಟ್ಟಿನಿಂದ ಕುದಿಯುತ್ತವೆ. ರಾಮಣ್ಣನವರ ಕಥನಲೋಕದಲ್ಲಿನ ವರ್ತಮಾನದ ಕಾಲದೇಶಗಳು, ಮನುಷ್ಯ ಬದುಕಿನ ವಿವಿಧ ಆಯಾಮಗಳು, ಜೀವಸಂಕುಲಗಳ ಸಂಭ್ರಮ-ಸಂಕಟಗಳು ಸಾರ್ವಕಾಲಿಕವಾಗುವ ಜೀವಗುಣವನ್ನು ಪಡೆದುಕೊಂಡಿವೆ.

ರಾಮಣ್ಣನವರ ಕಥೆಗಳೆಂದರೆ ಪ್ರೀತಿಸುವ, ಕೋಪಗೊಳ್ಳುವ, ನೊಂದುಕೊಳ್ಳುವ, ನಿಷ್ಟೂರವಾಗಿ ವರ್ತಿಸುವ, ನ್ಯಾಯಪರವಾಗಿ

ನಿಲ್ಲುವ ಅಂತ:ಕರಣ ಕಕ್ಕುಲಾತಿಗಳಿಂದಲೂ, ಅಷ್ಟೇ ನಿರ್ಮೋಹದಿಂದಲೂ ಕಟ್ಟಲ್ಪಟ್ಟ ರಚನೆಗಳಾಗಿವೆ. ಈ ಕಥೆಗಳು ಓದುಗರನ್ನು ಕೇಳುಗರನ್ನಾಗಿಸಿ ಜೀವಜಿನುಗುವಂತೆ ಮಾಡುವ ಮಾಯಸ್ಪರ್ಶವನ್ನು ಪಡೆದುಕೊಂಡಿವೆ. ಕನ್ನಡ ಭಾಷೆಯ ಸಂವೇದನಾ ಸಾಮರ್ಥ್ಯವನ್ನು ನಿರಂತರವಾಗಿ ಹಿಗ್ಗಿಸುವ ಸಾವಯವ ಲಕ್ಷಣವುಳ್ಳ ಕಥನ ಕ್ರಮವಿದು. ಕನ್ನಡದ ಮುಂಬರುವ ತಲೆಮಾರುಗಳು ಕಲಿಯಲೇಬೇಕಿರುವ ಸಂಸ್ಕೃತಿಯ ಪಾಠಗಳನ್ನು ರಾಮಣ್ಣ ಅವರ ಕಥೆಗಳು ತಮ್ಮ ಒಡಲೊಳಗೆ ಹುದುಗಿಸಿಕೊಂಡಿವೆ.

-ಕೆ.ವೈ. ನಾರಾಯಣಸ್ವಾಮಿ 

$2.60

Original: $8.65

-70%
ಕಣಜ

$8.65

$2.60

Description

ಭಾರತದ ಗ್ರಾಮೀಣ ಬದುಕಿನ ಬೇರಿಗೆ ಹತ್ತಿರುವ ರೋಗ ಮೂಲವನ್ನು ಹಾಗೂ ಮಣ್ಣಿನ ಗಾಯಗಳನ್ನು ಕುರಿತು ಜೀವ ತಲ್ಲಣಿಸುವಂತೆ ಬರೆದವರು ಬೆಸರಗಹಳ್ಳಿ ರಾಮಣ್ಣನವರು.

ವೈದ್ಯರಾಗಿದ್ದೂ ಮನುಷ್ಯ ಸಂಬಂಧಗಳ ತಾಳಿಕೆಯ ಗುಣವನ್ನು ಹೇಗೋ ಹಾಗೇ ಪ್ರಕೃತಿಯ ಸಂಗೋಪನಾ ಸಾಮರ್ಥ್ಯವನ್ನು, ಕೇಡಿನ ಬಲವನ್ನು ಒರೆಗಚ್ಚುವಂತೆ ಕಥೆ ಕಟ್ಟಿದವರು. ಅವರ ನಿರೂಪಣೆಗಳು ತೀವ್ರವಾದ ನೈತಿಕ ಸಿಟ್ಟಿನಿಂದ ಕುದಿಯುತ್ತವೆ. ರಾಮಣ್ಣನವರ ಕಥನಲೋಕದಲ್ಲಿನ ವರ್ತಮಾನದ ಕಾಲದೇಶಗಳು, ಮನುಷ್ಯ ಬದುಕಿನ ವಿವಿಧ ಆಯಾಮಗಳು, ಜೀವಸಂಕುಲಗಳ ಸಂಭ್ರಮ-ಸಂಕಟಗಳು ಸಾರ್ವಕಾಲಿಕವಾಗುವ ಜೀವಗುಣವನ್ನು ಪಡೆದುಕೊಂಡಿವೆ.

ರಾಮಣ್ಣನವರ ಕಥೆಗಳೆಂದರೆ ಪ್ರೀತಿಸುವ, ಕೋಪಗೊಳ್ಳುವ, ನೊಂದುಕೊಳ್ಳುವ, ನಿಷ್ಟೂರವಾಗಿ ವರ್ತಿಸುವ, ನ್ಯಾಯಪರವಾಗಿ

ನಿಲ್ಲುವ ಅಂತ:ಕರಣ ಕಕ್ಕುಲಾತಿಗಳಿಂದಲೂ, ಅಷ್ಟೇ ನಿರ್ಮೋಹದಿಂದಲೂ ಕಟ್ಟಲ್ಪಟ್ಟ ರಚನೆಗಳಾಗಿವೆ. ಈ ಕಥೆಗಳು ಓದುಗರನ್ನು ಕೇಳುಗರನ್ನಾಗಿಸಿ ಜೀವಜಿನುಗುವಂತೆ ಮಾಡುವ ಮಾಯಸ್ಪರ್ಶವನ್ನು ಪಡೆದುಕೊಂಡಿವೆ. ಕನ್ನಡ ಭಾಷೆಯ ಸಂವೇದನಾ ಸಾಮರ್ಥ್ಯವನ್ನು ನಿರಂತರವಾಗಿ ಹಿಗ್ಗಿಸುವ ಸಾವಯವ ಲಕ್ಷಣವುಳ್ಳ ಕಥನ ಕ್ರಮವಿದು. ಕನ್ನಡದ ಮುಂಬರುವ ತಲೆಮಾರುಗಳು ಕಲಿಯಲೇಬೇಕಿರುವ ಸಂಸ್ಕೃತಿಯ ಪಾಠಗಳನ್ನು ರಾಮಣ್ಣ ಅವರ ಕಥೆಗಳು ತಮ್ಮ ಒಡಲೊಳಗೆ ಹುದುಗಿಸಿಕೊಂಡಿವೆ.

-ಕೆ.ವೈ. ನಾರಾಯಣಸ್ವಾಮಿ 

ಕಣಜ | Harivu Books