HomeStore

ಜೀವರೇಶಿಮೆ

Product image 1

ಜೀವರೇಶಿಮೆ

ನಾನು ಮತ್ತೆ ಮತ್ತೆ ಪ್ರಸ್ತಾಪಿಸುವ, ಕೃತಿಯೊಂದರ ಒಟ್ಟಂದಕ್ಕೆ ಮುಖ್ಯ ಭೂಮಿಕೆಯಾಗಿರುವ ಸ್ಥಳೀಯತೆ-ಪ್ರಾದೇಶಿಕತೆ ಮತ್ತು ವೈವಿಧ್ಯತೆಗಳು ಬಾಬು ಅವರ ಪ್ರತಿಭೆಯ ಅನಾಯಾಸ ಅಂಶಗಳಾಗಿವೆ. ಸೂಕ್ಷ್ಮ ಒಳನೋಟ, ಪೂರ್ವಗ್ರಹಗಳಿಂದ ಮುಕ್ತವಾದ ಮನಸ್ಸು, ನಿರ್ಧಾರ ತೆಗೆದುಕೊಳ್ಳುವ ಆತುರತೆಯಿಂದ ಬಿಡುಗಡೆ ಪಡೆದಿರುವುದು, ಬದುಕಿನ ಕಹಿಯನ್ನು ಬೊಗಸೆಯಲ್ಲಿ ಸ್ವೀಕರಿಸಿ ರುಚಿ ನೋಡುವ ತೆರೆದ ಮನಸ್ಸು ಅವರ ದತ್ತ ಪ್ರತಿಭೆಗೆ ಗಟ್ಟಿ ಆಸರೆ ಒದಗಿಸಬಲ್ಲ ಪರಿಕರಗಳಾಗಿವೆ. ಕಥಾವಸ್ತು ನಿರ್ವಹಣೆ, ತೆಲುಗು ಮಿಶ್ರಿತ ಗಡಿಕನ್ನಡ ಭಾಷಾ ಬಳಕೆಯಲ್ಲಿನ ಪರಿಣತಿ, ಕಥನ ವಿನ್ಯಾಸವನ್ನು ನಿರ್ವಹಿಸುವಲ್ಲಿ ಬಾಬುಗಿರುವ ಕುಶಲತೆ ಕಥೆಗಳ ಸೊಬಗನ್ನು ಹೆಚ್ಚಿಸಿವೆ. ಕಥಾವಸ್ತುವಿನಲ್ಲಿನ ವೈವಿಧ್ಯತೆ ಕಥನದ ಹರಹು-ವ್ಯಾಪ್ತಿಯನ್ನು ಹೆಚ್ಚಿಸಿ, ಕಥೆಗಾರನಿಗಿರುವ ಕಳಕಳಿಯ ಅಂಶಗಳಾವುದು ಎಂಬುವತ್ತ ಓದುಗನ ಗಮನ ಸೆಳೆಯುತ್ತವೆ.

-ಕೇಶವ ಮಳಗಿ
ನಾನು ಮತ್ತೆ ಮತ್ತೆ ಪ್ರಸ್ತಾಪಿಸುವ, ಕೃತಿಯೊಂದರ ಒಟ್ಟಂದಕ್ಕೆ ಮುಖ್ಯ ಭೂಮಿಕೆಯಾಗಿರುವ ಸ್ಥಳೀಯತೆ-ಪ್ರಾದೇಶಿಕತೆ ಮತ್ತು ವೈವಿಧ್ಯತೆಗಳು ಬಾಬು ಅವರ ಪ್ರತಿಭೆಯ ಅನಾಯಾಸ ಅಂಶಗಳಾಗಿವೆ. ಸೂಕ್ಷ್ಮ ಒಳನೋಟ, ಪೂರ್ವಗ್ರಹಗಳಿಂದ ಮುಕ್ತವಾದ ಮನಸ್ಸು, ನಿರ್ಧಾರ ತೆಗೆದುಕೊಳ್ಳುವ ಆತುರತೆಯಿಂದ ಬಿಡುಗಡೆ ಪಡೆದಿರುವುದು, ಬದುಕಿನ ಕಹಿಯನ್ನು ಬೊಗಸೆಯಲ್ಲಿ ಸ್ವೀಕರಿಸಿ ರುಚಿ ನೋಡುವ ತೆರೆದ ಮನಸ್ಸು ಅವರ ದತ್ತ ಪ್ರತಿಭೆಗೆ ಗಟ್ಟಿ ಆಸರೆ ಒದಗಿಸಬಲ್ಲ ಪರಿಕರಗಳಾಗಿವೆ. ಕಥಾವಸ್ತು ನಿರ್ವಹಣೆ, ತೆಲುಗು ಮಿಶ್ರಿತ ಗಡಿಕನ್ನಡ ಭಾಷಾ ಬಳಕೆಯಲ್ಲಿನ ಪರಿಣತಿ, ಕಥನ ವಿನ್ಯಾಸವನ್ನು ನಿರ್ವಹಿಸುವಲ್ಲಿ ಬಾಬುಗಿರುವ ಕುಶಲತೆ ಕಥೆಗಳ ಸೊಬಗನ್ನು ಹೆಚ್ಚಿಸಿವೆ. ಕಥಾವಸ್ತುವಿನಲ್ಲಿನ ವೈವಿಧ್ಯತೆ ಕಥನದ ಹರಹು-ವ್ಯಾಪ್ತಿಯನ್ನು ಹೆಚ್ಚಿಸಿ, ಕಥೆಗಾರನಿಗಿರುವ ಕಳಕಳಿಯ ಅಂಶಗಳಾವುದು ಎಂಬುವತ್ತ ಓದುಗನ ಗಮನ ಸೆಳೆಯುತ್ತವೆ.

-ಕೇಶವ ಮಳಗಿ
$1.51
ಜೀವರೇಶಿಮೆ
$1.51

Description

ನಾನು ಮತ್ತೆ ಮತ್ತೆ ಪ್ರಸ್ತಾಪಿಸುವ, ಕೃತಿಯೊಂದರ ಒಟ್ಟಂದಕ್ಕೆ ಮುಖ್ಯ ಭೂಮಿಕೆಯಾಗಿರುವ ಸ್ಥಳೀಯತೆ-ಪ್ರಾದೇಶಿಕತೆ ಮತ್ತು ವೈವಿಧ್ಯತೆಗಳು ಬಾಬು ಅವರ ಪ್ರತಿಭೆಯ ಅನಾಯಾಸ ಅಂಶಗಳಾಗಿವೆ. ಸೂಕ್ಷ್ಮ ಒಳನೋಟ, ಪೂರ್ವಗ್ರಹಗಳಿಂದ ಮುಕ್ತವಾದ ಮನಸ್ಸು, ನಿರ್ಧಾರ ತೆಗೆದುಕೊಳ್ಳುವ ಆತುರತೆಯಿಂದ ಬಿಡುಗಡೆ ಪಡೆದಿರುವುದು, ಬದುಕಿನ ಕಹಿಯನ್ನು ಬೊಗಸೆಯಲ್ಲಿ ಸ್ವೀಕರಿಸಿ ರುಚಿ ನೋಡುವ ತೆರೆದ ಮನಸ್ಸು ಅವರ ದತ್ತ ಪ್ರತಿಭೆಗೆ ಗಟ್ಟಿ ಆಸರೆ ಒದಗಿಸಬಲ್ಲ ಪರಿಕರಗಳಾಗಿವೆ. ಕಥಾವಸ್ತು ನಿರ್ವಹಣೆ, ತೆಲುಗು ಮಿಶ್ರಿತ ಗಡಿಕನ್ನಡ ಭಾಷಾ ಬಳಕೆಯಲ್ಲಿನ ಪರಿಣತಿ, ಕಥನ ವಿನ್ಯಾಸವನ್ನು ನಿರ್ವಹಿಸುವಲ್ಲಿ ಬಾಬುಗಿರುವ ಕುಶಲತೆ ಕಥೆಗಳ ಸೊಬಗನ್ನು ಹೆಚ್ಚಿಸಿವೆ. ಕಥಾವಸ್ತುವಿನಲ್ಲಿನ ವೈವಿಧ್ಯತೆ ಕಥನದ ಹರಹು-ವ್ಯಾಪ್ತಿಯನ್ನು ಹೆಚ್ಚಿಸಿ, ಕಥೆಗಾರನಿಗಿರುವ ಕಳಕಳಿಯ ಅಂಶಗಳಾವುದು ಎಂಬುವತ್ತ ಓದುಗನ ಗಮನ ಸೆಳೆಯುತ್ತವೆ.

-ಕೇಶವ ಮಳಗಿ
ಜೀವರೇಶಿಮೆ | Harivu Books