HomeStore

ಹಸಿರು ಅಧ್ಯಾತ್ಮ

Product image 1
1 / 2

ಹಸಿರು ಅಧ್ಯಾತ್ಮ

"ಕಣ್ಣು ಮತ್ತು ಕಿವಿ ಎರಡೂ ಜಾಗೃತವಾಗಿರಬೇಕಾದ ಜಾಗ ಕಾಡು. ಕಾಡು ನಾಡಾದ, ನಾಡು ನಗರವಾದ, ನಗರ ಮಹಾನಗರವಾಗುವ ವೇಗದ ಓಟದಲ್ಲಿ ನಮ್ಮ ಕರಣಗಳು ಕೂಡ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿವೆ. ಈಗಲೂ ಕಾಡೊಳಗಡೆ ಅನ್ನ, ನೀರು ಹುಡುಕಿಕೊಳ್ಳುವ ಇತರ ಜೀವಿಗಳಿಗಿರುವ ಸೂಕ್ಷ್ಮತೆ ಅವುಗಳನ್ನು ಸಂಗ್ರಹಿಸಿಕೊಂಡ, ಉತ್ತಿ, ಬಿತ್ತಿ, ಬೆಳೆಸಿ, ಉತ್ಪಾದಿಸಿಕೊಂಡ ಮನುಷ್ಯನಿಗೆ ಇಲ್ಲ. ನವಮಾಧ್ಯಮ ಬಂದ ಮೇಲಂತೂ ನಮ್ಮ ಸಮ್ಮುಖದ ಮಾತು, ಪ್ರೀತಿ, ಸುಖ-ದುಃಖದ ಹಂಚಿಕೆಗಳಿಗೂ ಕೂಡ ಕೊರತೆ ಅಂಟಿದೆ. ನಾವು ಯಂತ್ರ ಕಟ್ಟಿಕೊಂಡಷ್ಟು ಸಹವಾಸ-ಸಂಬಂಧದಲ್ಲಿ ದೋಷ ಹೆಚ್ಚಾಗುತ್ತಿದೆ.

ಕಿಸೆಯಲ್ಲಿರುವ ಕಾಸಿನಿಂದ ಆಹಾರ ಸಂಪಾದಿಸಬಲ್ಲೆ ಎಂಬ ಅಹಂನಿಂದಾಗಿ ಮನುಷ್ಯ ನಡೆದ ದಾರಿಯಲ್ಲೆಲ್ಲ ಅನಾಹುತಗಳು ಸೃಷ್ಟಿಯಾಗುತ್ತಿವೆ. ಅನ್ನ, ಹಣ ಸಂಪಾದಿಸುವ, ಕೂಡಿಡುವ ಮನುಷ್ಯನ ಘನ ವಿಕಾರಗಳಿಗೆ ಮೊದಲ ಆಹುತಿಯೇ ಈ ಪ್ರಕೃತಿ ಎಂಬುದು ಈಗ ಲೋಕಸತ್ಯ.

'ಹಸಿರು ಅಧ್ಯಾತ್ಮ' – ನನ್ನ ಪರಿಸರ ಸಮನ್ವಯ, ಕೃಷಿ, ನೆಲಪ್ರೀತಿಯ ಸಾಧಕರ ಕುರಿತು ಒಂದಷ್ಟು ಪ್ರಬಂಧ, ನುಡಿಚಿತ್ರಗಳ ಸಂಗ್ರಹ. ಹಸಿರು ನೋಟದ ಕಾಡಿನ ಸಾವಯವ ಸಂಬಂಧವನ್ನು ತೆರೆದಿಡುವ ಒಂದಷ್ಟು ನೆಲ ಪ್ರಬಂಧಗಳು ಇಲ್ಲಿವೆ."

"ಕಣ್ಣು ಮತ್ತು ಕಿವಿ ಎರಡೂ ಜಾಗೃತವಾಗಿರಬೇಕಾದ ಜಾಗ ಕಾಡು. ಕಾಡು ನಾಡಾದ, ನಾಡು ನಗರವಾದ, ನಗರ ಮಹಾನಗರವಾಗುವ ವೇಗದ ಓಟದಲ್ಲಿ ನಮ್ಮ ಕರಣಗಳು ಕೂಡ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿವೆ. ಈಗಲೂ ಕಾಡೊಳಗಡೆ ಅನ್ನ, ನೀರು ಹುಡುಕಿಕೊಳ್ಳುವ ಇತರ ಜೀವಿಗಳಿಗಿರುವ ಸೂಕ್ಷ್ಮತೆ ಅವುಗಳನ್ನು ಸಂಗ್ರಹಿಸಿಕೊಂಡ, ಉತ್ತಿ, ಬಿತ್ತಿ, ಬೆಳೆಸಿ, ಉತ್ಪಾದಿಸಿಕೊಂಡ ಮನುಷ್ಯನಿಗೆ ಇಲ್ಲ. ನವಮಾಧ್ಯಮ ಬಂದ ಮೇಲಂತೂ ನಮ್ಮ ಸಮ್ಮುಖದ ಮಾತು, ಪ್ರೀತಿ, ಸುಖ-ದುಃಖದ ಹಂಚಿಕೆಗಳಿಗೂ ಕೂಡ ಕೊರತೆ ಅಂಟಿದೆ. ನಾವು ಯಂತ್ರ ಕಟ್ಟಿಕೊಂಡಷ್ಟು ಸಹವಾಸ-ಸಂಬಂಧದಲ್ಲಿ ದೋಷ ಹೆಚ್ಚಾಗುತ್ತಿದೆ.

ಕಿಸೆಯಲ್ಲಿರುವ ಕಾಸಿನಿಂದ ಆಹಾರ ಸಂಪಾದಿಸಬಲ್ಲೆ ಎಂಬ ಅಹಂನಿಂದಾಗಿ ಮನುಷ್ಯ ನಡೆದ ದಾರಿಯಲ್ಲೆಲ್ಲ ಅನಾಹುತಗಳು ಸೃಷ್ಟಿಯಾಗುತ್ತಿವೆ. ಅನ್ನ, ಹಣ ಸಂಪಾದಿಸುವ, ಕೂಡಿಡುವ ಮನುಷ್ಯನ ಘನ ವಿಕಾರಗಳಿಗೆ ಮೊದಲ ಆಹುತಿಯೇ ಈ ಪ್ರಕೃತಿ ಎಂಬುದು ಈಗ ಲೋಕಸತ್ಯ.

'ಹಸಿರು ಅಧ್ಯಾತ್ಮ' – ನನ್ನ ಪರಿಸರ ಸಮನ್ವಯ, ಕೃಷಿ, ನೆಲಪ್ರೀತಿಯ ಸಾಧಕರ ಕುರಿತು ಒಂದಷ್ಟು ಪ್ರಬಂಧ, ನುಡಿಚಿತ್ರಗಳ ಸಂಗ್ರಹ. ಹಸಿರು ನೋಟದ ಕಾಡಿನ ಸಾವಯವ ಸಂಬಂಧವನ್ನು ತೆರೆದಿಡುವ ಒಂದಷ್ಟು ನೆಲ ಪ್ರಬಂಧಗಳು ಇಲ್ಲಿವೆ."

$0.58

Original: $1.95

-70%
ಹಸಿರು ಅಧ್ಯಾತ್ಮ

$1.95

$0.58

Description

"ಕಣ್ಣು ಮತ್ತು ಕಿವಿ ಎರಡೂ ಜಾಗೃತವಾಗಿರಬೇಕಾದ ಜಾಗ ಕಾಡು. ಕಾಡು ನಾಡಾದ, ನಾಡು ನಗರವಾದ, ನಗರ ಮಹಾನಗರವಾಗುವ ವೇಗದ ಓಟದಲ್ಲಿ ನಮ್ಮ ಕರಣಗಳು ಕೂಡ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿವೆ. ಈಗಲೂ ಕಾಡೊಳಗಡೆ ಅನ್ನ, ನೀರು ಹುಡುಕಿಕೊಳ್ಳುವ ಇತರ ಜೀವಿಗಳಿಗಿರುವ ಸೂಕ್ಷ್ಮತೆ ಅವುಗಳನ್ನು ಸಂಗ್ರಹಿಸಿಕೊಂಡ, ಉತ್ತಿ, ಬಿತ್ತಿ, ಬೆಳೆಸಿ, ಉತ್ಪಾದಿಸಿಕೊಂಡ ಮನುಷ್ಯನಿಗೆ ಇಲ್ಲ. ನವಮಾಧ್ಯಮ ಬಂದ ಮೇಲಂತೂ ನಮ್ಮ ಸಮ್ಮುಖದ ಮಾತು, ಪ್ರೀತಿ, ಸುಖ-ದುಃಖದ ಹಂಚಿಕೆಗಳಿಗೂ ಕೂಡ ಕೊರತೆ ಅಂಟಿದೆ. ನಾವು ಯಂತ್ರ ಕಟ್ಟಿಕೊಂಡಷ್ಟು ಸಹವಾಸ-ಸಂಬಂಧದಲ್ಲಿ ದೋಷ ಹೆಚ್ಚಾಗುತ್ತಿದೆ.

ಕಿಸೆಯಲ್ಲಿರುವ ಕಾಸಿನಿಂದ ಆಹಾರ ಸಂಪಾದಿಸಬಲ್ಲೆ ಎಂಬ ಅಹಂನಿಂದಾಗಿ ಮನುಷ್ಯ ನಡೆದ ದಾರಿಯಲ್ಲೆಲ್ಲ ಅನಾಹುತಗಳು ಸೃಷ್ಟಿಯಾಗುತ್ತಿವೆ. ಅನ್ನ, ಹಣ ಸಂಪಾದಿಸುವ, ಕೂಡಿಡುವ ಮನುಷ್ಯನ ಘನ ವಿಕಾರಗಳಿಗೆ ಮೊದಲ ಆಹುತಿಯೇ ಈ ಪ್ರಕೃತಿ ಎಂಬುದು ಈಗ ಲೋಕಸತ್ಯ.

'ಹಸಿರು ಅಧ್ಯಾತ್ಮ' – ನನ್ನ ಪರಿಸರ ಸಮನ್ವಯ, ಕೃಷಿ, ನೆಲಪ್ರೀತಿಯ ಸಾಧಕರ ಕುರಿತು ಒಂದಷ್ಟು ಪ್ರಬಂಧ, ನುಡಿಚಿತ್ರಗಳ ಸಂಗ್ರಹ. ಹಸಿರು ನೋಟದ ಕಾಡಿನ ಸಾವಯವ ಸಂಬಂಧವನ್ನು ತೆರೆದಿಡುವ ಒಂದಷ್ಟು ನೆಲ ಪ್ರಬಂಧಗಳು ಇಲ್ಲಿವೆ."

ಹಸಿರು ಅಧ್ಯಾತ್ಮ | Harivu Books