HomeStore

ಅಮ್ಮ ಎಂಬ ಕಡಲು

Product image 1
1 / 2

ಅಮ್ಮ ಎಂಬ ಕಡಲು

ಹಸನಡೋಂಗ್ರಿ ಬೇಪಾರಿಯವರು ವೃತ್ತಿಯಲ್ಲಿ ಪತ್ರಕರ್ತರಾದರೂ ಪ್ರವೃತ್ತಿಯಲ್ಲಿ ಲೇಖಕ. ಈಗ ಬದುಕನ್ನು ಗೆಲ್ಲಬಲ್ಲ ಬದುಕನ್ನು ಬದಲಿಸಬಲ್ಲ ಮನೋ ಇಂಗಿತವನ್ನಿಟ್ಟುಕೊಂಡು ಬರೆದ ಕಥೆಗಳೊಂದಿಗೆ ಮುಖಾಮುಖಿಯಾಗಿ ಎದುರಿಗೆ ತಮ್ಮ ಪ್ರಥಮ ಕಥಾ ಸಂಕಲನದೊಂದಿಗೆ ನಿಂತಿದ್ದಾರೆ. ಕಥೆಯು ಹೇಳುವ ಸಂದೇಶಕ್ಕೂ, ಸಿದ್ಧ ಮಾದರಿಯ ಲೇಖನವೊಂದು ಹೇಳುವ ಪರಿಪಾಠಕ್ಕೂ, ಪತ್ರಿಕಾ ವರದಿಗಳು ನೀಡುವ ಧ್ವನಿಗೂ ವ್ಯತ್ಯಾಸವಿದೆ ಎಂದು ಗಮನವಿರಿಸಿಕೊಂಡೇ ಕಥಾ ರಚನೆಗೆ ಇಳಿದ ಹಸನಡೋಂಗ್ರಿ ಬೇಪಾರಿಯವರು ನಾನು ಹತ್ತಿರದಿಂದ ಬಲ್ಲ ಉತ್ಸಾಹಿ ಯುವಕ.

ಇಲ್ಲಿರುವ ಕಥಾ ಚೌಕಟ್ಟುಗಳನ್ನು ಗಮನಿಸಿದರೆ, ಎಲ್ಲ ಕಥೆಗಳೂ ನಮ್ಮ ದಿನನಿತ್ಯದ ಬದುಕಿನಲ್ಲಿ ಕಾಣುವ ಅನುಭವಿಸುವ ಮತ್ತು ಗಮನಿಸಿದ ಕಥಾ ವಸ್ತುಗಳೇ. ಇಂತಹ ಸಂಗತಿಗಳನ್ನೇ ಕಥೆ ಮಾಡಬೇಕೆನ್ನುವ ಬೇಪಾರಿಯವರ ಆಸಕ್ತಿಯನ್ನು ಗಮನಿಸಿದಾಗ ಅವರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಶವೂ ವಿಶಿಷ್ಟವಾಗಿದೆ ಎನಿಸುತ್ತದೆ. ಕೆಲವೊಮ್ಮೆ ನಮ್ಮೊಳಗಿನ, ನಮ್ಮ ಮನೆಯೊಳಗಿನ, ನಮ್ಮ ಸಮಾಜದೊಳಗಿನ ಮಗ್ಗಲು ಗೋಡೆಗಳೇ ಬೆಟ್ಟವಾಗಿ ದಾಟಲಾಗದೇ ಒದ್ದಾಡಿಸುವಂತವು. ಇಂತಹ ಅಡ್ಡ ಬಂದ ಸಂಗತಿಗಳನ್ನು ಎದುರಿಸುವ ಸನ್ನಿವೇಶಗಳನ್ನು ಸರಳವಾಗಿಯೂ, ಮತ್ತು ನೇರವಾಗಿಯೂ ಕಟ್ಟಿಕೊಟ್ಟಿರುವ ಕಥೆಗಳಿವು. ಯಾವುದೇ ರೀತಿಯ ಹೊಸತನದ ಪ್ರಯೋಗಕ್ಕೆ ಒಡ್ಡಿಲ್ಲ ಎಂದು ಕಥಾಪ್ರಯತ್ನಗಳನ್ನು ವಿಮರ್ಶಾ ದೃಷ್ಟಿಕೋನದಿಂದ ಕಾಣದೇ ಮನಸ್ಸು ಗ್ರಹಿಸಿದ ಸಂಗತಿಗಳಲ್ಲಿ ಕಥೆಗಳ ಜಾಡು ಹೇಗೆ ಅನವಶ್ಯಕ ಸಂಗತಿಗಳನ್ನು ದೂರಾಗಿಸುತ್ತದೆ ಎಂಬುದನ್ನು ಕಥಾ ತಿರುಳಾಗಿ ಇಲ್ಲಿ ಕಾಣಬಹುದು.

-ಡಾ.ಲಲಿತಾ.ಕೆ ಹೊಸಪ್ಯಾಟಿ
 ಹಿರಿಯ ಸಾಹಿತಿಗಳು 

ಹಸನಡೋಂಗ್ರಿ ಬೇಪಾರಿಯವರು ವೃತ್ತಿಯಲ್ಲಿ ಪತ್ರಕರ್ತರಾದರೂ ಪ್ರವೃತ್ತಿಯಲ್ಲಿ ಲೇಖಕ. ಈಗ ಬದುಕನ್ನು ಗೆಲ್ಲಬಲ್ಲ ಬದುಕನ್ನು ಬದಲಿಸಬಲ್ಲ ಮನೋ ಇಂಗಿತವನ್ನಿಟ್ಟುಕೊಂಡು ಬರೆದ ಕಥೆಗಳೊಂದಿಗೆ ಮುಖಾಮುಖಿಯಾಗಿ ಎದುರಿಗೆ ತಮ್ಮ ಪ್ರಥಮ ಕಥಾ ಸಂಕಲನದೊಂದಿಗೆ ನಿಂತಿದ್ದಾರೆ. ಕಥೆಯು ಹೇಳುವ ಸಂದೇಶಕ್ಕೂ, ಸಿದ್ಧ ಮಾದರಿಯ ಲೇಖನವೊಂದು ಹೇಳುವ ಪರಿಪಾಠಕ್ಕೂ, ಪತ್ರಿಕಾ ವರದಿಗಳು ನೀಡುವ ಧ್ವನಿಗೂ ವ್ಯತ್ಯಾಸವಿದೆ ಎಂದು ಗಮನವಿರಿಸಿಕೊಂಡೇ ಕಥಾ ರಚನೆಗೆ ಇಳಿದ ಹಸನಡೋಂಗ್ರಿ ಬೇಪಾರಿಯವರು ನಾನು ಹತ್ತಿರದಿಂದ ಬಲ್ಲ ಉತ್ಸಾಹಿ ಯುವಕ.

ಇಲ್ಲಿರುವ ಕಥಾ ಚೌಕಟ್ಟುಗಳನ್ನು ಗಮನಿಸಿದರೆ, ಎಲ್ಲ ಕಥೆಗಳೂ ನಮ್ಮ ದಿನನಿತ್ಯದ ಬದುಕಿನಲ್ಲಿ ಕಾಣುವ ಅನುಭವಿಸುವ ಮತ್ತು ಗಮನಿಸಿದ ಕಥಾ ವಸ್ತುಗಳೇ. ಇಂತಹ ಸಂಗತಿಗಳನ್ನೇ ಕಥೆ ಮಾಡಬೇಕೆನ್ನುವ ಬೇಪಾರಿಯವರ ಆಸಕ್ತಿಯನ್ನು ಗಮನಿಸಿದಾಗ ಅವರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಶವೂ ವಿಶಿಷ್ಟವಾಗಿದೆ ಎನಿಸುತ್ತದೆ. ಕೆಲವೊಮ್ಮೆ ನಮ್ಮೊಳಗಿನ, ನಮ್ಮ ಮನೆಯೊಳಗಿನ, ನಮ್ಮ ಸಮಾಜದೊಳಗಿನ ಮಗ್ಗಲು ಗೋಡೆಗಳೇ ಬೆಟ್ಟವಾಗಿ ದಾಟಲಾಗದೇ ಒದ್ದಾಡಿಸುವಂತವು. ಇಂತಹ ಅಡ್ಡ ಬಂದ ಸಂಗತಿಗಳನ್ನು ಎದುರಿಸುವ ಸನ್ನಿವೇಶಗಳನ್ನು ಸರಳವಾಗಿಯೂ, ಮತ್ತು ನೇರವಾಗಿಯೂ ಕಟ್ಟಿಕೊಟ್ಟಿರುವ ಕಥೆಗಳಿವು. ಯಾವುದೇ ರೀತಿಯ ಹೊಸತನದ ಪ್ರಯೋಗಕ್ಕೆ ಒಡ್ಡಿಲ್ಲ ಎಂದು ಕಥಾಪ್ರಯತ್ನಗಳನ್ನು ವಿಮರ್ಶಾ ದೃಷ್ಟಿಕೋನದಿಂದ ಕಾಣದೇ ಮನಸ್ಸು ಗ್ರಹಿಸಿದ ಸಂಗತಿಗಳಲ್ಲಿ ಕಥೆಗಳ ಜಾಡು ಹೇಗೆ ಅನವಶ್ಯಕ ಸಂಗತಿಗಳನ್ನು ದೂರಾಗಿಸುತ್ತದೆ ಎಂಬುದನ್ನು ಕಥಾ ತಿರುಳಾಗಿ ಇಲ್ಲಿ ಕಾಣಬಹುದು.

-ಡಾ.ಲಲಿತಾ.ಕೆ ಹೊಸಪ್ಯಾಟಿ
 ಹಿರಿಯ ಸಾಹಿತಿಗಳು 

$0.49

Original: $1.62

-70%
ಅಮ್ಮ ಎಂಬ ಕಡಲು

$1.62

$0.49

Description

ಹಸನಡೋಂಗ್ರಿ ಬೇಪಾರಿಯವರು ವೃತ್ತಿಯಲ್ಲಿ ಪತ್ರಕರ್ತರಾದರೂ ಪ್ರವೃತ್ತಿಯಲ್ಲಿ ಲೇಖಕ. ಈಗ ಬದುಕನ್ನು ಗೆಲ್ಲಬಲ್ಲ ಬದುಕನ್ನು ಬದಲಿಸಬಲ್ಲ ಮನೋ ಇಂಗಿತವನ್ನಿಟ್ಟುಕೊಂಡು ಬರೆದ ಕಥೆಗಳೊಂದಿಗೆ ಮುಖಾಮುಖಿಯಾಗಿ ಎದುರಿಗೆ ತಮ್ಮ ಪ್ರಥಮ ಕಥಾ ಸಂಕಲನದೊಂದಿಗೆ ನಿಂತಿದ್ದಾರೆ. ಕಥೆಯು ಹೇಳುವ ಸಂದೇಶಕ್ಕೂ, ಸಿದ್ಧ ಮಾದರಿಯ ಲೇಖನವೊಂದು ಹೇಳುವ ಪರಿಪಾಠಕ್ಕೂ, ಪತ್ರಿಕಾ ವರದಿಗಳು ನೀಡುವ ಧ್ವನಿಗೂ ವ್ಯತ್ಯಾಸವಿದೆ ಎಂದು ಗಮನವಿರಿಸಿಕೊಂಡೇ ಕಥಾ ರಚನೆಗೆ ಇಳಿದ ಹಸನಡೋಂಗ್ರಿ ಬೇಪಾರಿಯವರು ನಾನು ಹತ್ತಿರದಿಂದ ಬಲ್ಲ ಉತ್ಸಾಹಿ ಯುವಕ.

ಇಲ್ಲಿರುವ ಕಥಾ ಚೌಕಟ್ಟುಗಳನ್ನು ಗಮನಿಸಿದರೆ, ಎಲ್ಲ ಕಥೆಗಳೂ ನಮ್ಮ ದಿನನಿತ್ಯದ ಬದುಕಿನಲ್ಲಿ ಕಾಣುವ ಅನುಭವಿಸುವ ಮತ್ತು ಗಮನಿಸಿದ ಕಥಾ ವಸ್ತುಗಳೇ. ಇಂತಹ ಸಂಗತಿಗಳನ್ನೇ ಕಥೆ ಮಾಡಬೇಕೆನ್ನುವ ಬೇಪಾರಿಯವರ ಆಸಕ್ತಿಯನ್ನು ಗಮನಿಸಿದಾಗ ಅವರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಶವೂ ವಿಶಿಷ್ಟವಾಗಿದೆ ಎನಿಸುತ್ತದೆ. ಕೆಲವೊಮ್ಮೆ ನಮ್ಮೊಳಗಿನ, ನಮ್ಮ ಮನೆಯೊಳಗಿನ, ನಮ್ಮ ಸಮಾಜದೊಳಗಿನ ಮಗ್ಗಲು ಗೋಡೆಗಳೇ ಬೆಟ್ಟವಾಗಿ ದಾಟಲಾಗದೇ ಒದ್ದಾಡಿಸುವಂತವು. ಇಂತಹ ಅಡ್ಡ ಬಂದ ಸಂಗತಿಗಳನ್ನು ಎದುರಿಸುವ ಸನ್ನಿವೇಶಗಳನ್ನು ಸರಳವಾಗಿಯೂ, ಮತ್ತು ನೇರವಾಗಿಯೂ ಕಟ್ಟಿಕೊಟ್ಟಿರುವ ಕಥೆಗಳಿವು. ಯಾವುದೇ ರೀತಿಯ ಹೊಸತನದ ಪ್ರಯೋಗಕ್ಕೆ ಒಡ್ಡಿಲ್ಲ ಎಂದು ಕಥಾಪ್ರಯತ್ನಗಳನ್ನು ವಿಮರ್ಶಾ ದೃಷ್ಟಿಕೋನದಿಂದ ಕಾಣದೇ ಮನಸ್ಸು ಗ್ರಹಿಸಿದ ಸಂಗತಿಗಳಲ್ಲಿ ಕಥೆಗಳ ಜಾಡು ಹೇಗೆ ಅನವಶ್ಯಕ ಸಂಗತಿಗಳನ್ನು ದೂರಾಗಿಸುತ್ತದೆ ಎಂಬುದನ್ನು ಕಥಾ ತಿರುಳಾಗಿ ಇಲ್ಲಿ ಕಾಣಬಹುದು.

-ಡಾ.ಲಲಿತಾ.ಕೆ ಹೊಸಪ್ಯಾಟಿ
 ಹಿರಿಯ ಸಾಹಿತಿಗಳು 

ಅಮ್ಮ ಎಂಬ ಕಡಲು | Harivu Books