
ಆಟಗಾಯಿ
ಜಾಗತೀಕರಣ ನಂತರದ ಆಧುನಿಕ ಸಂವೇದನೆಗಳಿಗೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಜನಜೀವನವು ಇಲ್ಲಿನ ಕಥೆಗಳಲಿನ ಜೀವಾಳವಾಗಿದೆ. ಕಥನದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು ಮೂರು ದಶಕದ ನಂತರದ ಈ ದಿನಗಳ ಧಾವಂತದ ಬದುಕಿನ ನಡುವೆಯೂ ಕಾಪಾಡಿಕೊಂಡು ಕಟ್ಟುವುದು ನೈಪುಣ್ಯತೆಯ ಮಾತು ಮಾತ್ರವಲ್ಲ ಅದು ಕಥೆಗಾರನ ಅಂತರ್ಯದೊಳಗೆ ಹುದುಗಿಕೊಂಡಿರುವ ಸೃಜನಶೀಲತೆಯ ಆತ್ಮಸ್ಥೆರ್ಯವೂ ಆಗಿದೆ.
ಕುಟುಂಬಗಳಲ್ಲಿನ ಹಲವು ಸಂಬಂಧಗಳ ಪಾತ್ರ, ಅವುಗಳ ಚಲನೆ, ಬೆಳವಣಿಗೆ ಮತ್ತು ನಿರ್ಗಮನಗಳು ಗಾಢವಾಗಿ ಕಥೆಗಾರನ ಮನಸ್ಸನ್ನ ಪರಿಣಾಮಿಸಿರುವುದನ್ನು ಇಲ್ಲಿನ ಎಲ್ಲ ಕಥಾಹಂದರಗಳಲ್ಲು ಕಾಣಬಹುದಾಗಿದೆ. ಇಂತಹದ್ದೊಂದು ಕುಟುಂಬ ವಾಸ್ತವವು ಇವತ್ತಿಗೂ ಇದೆ, ಆದರೆ ಅದು ಮತ್ತಷ್ಟು ಹಂತಗಳನ್ನು ದಾಟಿ ಹಲವು ಪಲ್ಲಟಗಳಿಗೆ ಸಿಲುಕಿ ಮತ್ತೊಂದು ಹಂತಕ್ಕೆ ಬದಲಾವಣೆಗೊಂಡಿದೆಯಷ್ಟೇ! ಆ ಬದಲಾವಣೆಯು ಕಥೆಗಳನ್ನು ಓದುವಾಗ ಓದುಗನ ಮನೋಭಿತ್ತಿಯಲ್ಲಿ ಮೂಡಬಹುದು.
ಬಹುತೇಕ ಕಥೆಗಳಲ್ಲಿ ಪಾತ್ರದಂತೆಯೇ ಕಾಣಸಿಗುವ 'ಪತ್ರಗಳು' ಮರೆತುಹೋದ ಒಂದು ಸೋದರ ಸಂಬಂಧದಂತೆ ಭಾಸವಾಗುತ್ತವೆ.
-ರಾಜೇಂದ್ರ ಪ್ರಸಾದ್
ಜಾಗತೀಕರಣ ನಂತರದ ಆಧುನಿಕ ಸಂವೇದನೆಗಳಿಗೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಜನಜೀವನವು ಇಲ್ಲಿನ ಕಥೆಗಳಲಿನ ಜೀವಾಳವಾಗಿದೆ. ಕಥನದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು ಮೂರು ದಶಕದ ನಂತರದ ಈ ದಿನಗಳ ಧಾವಂತದ ಬದುಕಿನ ನಡುವೆಯೂ ಕಾಪಾಡಿಕೊಂಡು ಕಟ್ಟುವುದು ನೈಪುಣ್ಯತೆಯ ಮಾತು ಮಾತ್ರವಲ್ಲ ಅದು ಕಥೆಗಾರನ ಅಂತರ್ಯದೊಳಗೆ ಹುದುಗಿಕೊಂಡಿರುವ ಸೃಜನಶೀಲತೆಯ ಆತ್ಮಸ್ಥೆರ್ಯವೂ ಆಗಿದೆ.
ಕುಟುಂಬಗಳಲ್ಲಿನ ಹಲವು ಸಂಬಂಧಗಳ ಪಾತ್ರ, ಅವುಗಳ ಚಲನೆ, ಬೆಳವಣಿಗೆ ಮತ್ತು ನಿರ್ಗಮನಗಳು ಗಾಢವಾಗಿ ಕಥೆಗಾರನ ಮನಸ್ಸನ್ನ ಪರಿಣಾಮಿಸಿರುವುದನ್ನು ಇಲ್ಲಿನ ಎಲ್ಲ ಕಥಾಹಂದರಗಳಲ್ಲು ಕಾಣಬಹುದಾಗಿದೆ. ಇಂತಹದ್ದೊಂದು ಕುಟುಂಬ ವಾಸ್ತವವು ಇವತ್ತಿಗೂ ಇದೆ, ಆದರೆ ಅದು ಮತ್ತಷ್ಟು ಹಂತಗಳನ್ನು ದಾಟಿ ಹಲವು ಪಲ್ಲಟಗಳಿಗೆ ಸಿಲುಕಿ ಮತ್ತೊಂದು ಹಂತಕ್ಕೆ ಬದಲಾವಣೆಗೊಂಡಿದೆಯಷ್ಟೇ! ಆ ಬದಲಾವಣೆಯು ಕಥೆಗಳನ್ನು ಓದುವಾಗ ಓದುಗನ ಮನೋಭಿತ್ತಿಯಲ್ಲಿ ಮೂಡಬಹುದು.
ಬಹುತೇಕ ಕಥೆಗಳಲ್ಲಿ ಪಾತ್ರದಂತೆಯೇ ಕಾಣಸಿಗುವ 'ಪತ್ರಗಳು' ಮರೆತುಹೋದ ಒಂದು ಸೋದರ ಸಂಬಂಧದಂತೆ ಭಾಸವಾಗುತ್ತವೆ.
-ರಾಜೇಂದ್ರ ಪ್ರಸಾದ್
Description
ಜಾಗತೀಕರಣ ನಂತರದ ಆಧುನಿಕ ಸಂವೇದನೆಗಳಿಗೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಜನಜೀವನವು ಇಲ್ಲಿನ ಕಥೆಗಳಲಿನ ಜೀವಾಳವಾಗಿದೆ. ಕಥನದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು ಮೂರು ದಶಕದ ನಂತರದ ಈ ದಿನಗಳ ಧಾವಂತದ ಬದುಕಿನ ನಡುವೆಯೂ ಕಾಪಾಡಿಕೊಂಡು ಕಟ್ಟುವುದು ನೈಪುಣ್ಯತೆಯ ಮಾತು ಮಾತ್ರವಲ್ಲ ಅದು ಕಥೆಗಾರನ ಅಂತರ್ಯದೊಳಗೆ ಹುದುಗಿಕೊಂಡಿರುವ ಸೃಜನಶೀಲತೆಯ ಆತ್ಮಸ್ಥೆರ್ಯವೂ ಆಗಿದೆ.
ಕುಟುಂಬಗಳಲ್ಲಿನ ಹಲವು ಸಂಬಂಧಗಳ ಪಾತ್ರ, ಅವುಗಳ ಚಲನೆ, ಬೆಳವಣಿಗೆ ಮತ್ತು ನಿರ್ಗಮನಗಳು ಗಾಢವಾಗಿ ಕಥೆಗಾರನ ಮನಸ್ಸನ್ನ ಪರಿಣಾಮಿಸಿರುವುದನ್ನು ಇಲ್ಲಿನ ಎಲ್ಲ ಕಥಾಹಂದರಗಳಲ್ಲು ಕಾಣಬಹುದಾಗಿದೆ. ಇಂತಹದ್ದೊಂದು ಕುಟುಂಬ ವಾಸ್ತವವು ಇವತ್ತಿಗೂ ಇದೆ, ಆದರೆ ಅದು ಮತ್ತಷ್ಟು ಹಂತಗಳನ್ನು ದಾಟಿ ಹಲವು ಪಲ್ಲಟಗಳಿಗೆ ಸಿಲುಕಿ ಮತ್ತೊಂದು ಹಂತಕ್ಕೆ ಬದಲಾವಣೆಗೊಂಡಿದೆಯಷ್ಟೇ! ಆ ಬದಲಾವಣೆಯು ಕಥೆಗಳನ್ನು ಓದುವಾಗ ಓದುಗನ ಮನೋಭಿತ್ತಿಯಲ್ಲಿ ಮೂಡಬಹುದು.
ಬಹುತೇಕ ಕಥೆಗಳಲ್ಲಿ ಪಾತ್ರದಂತೆಯೇ ಕಾಣಸಿಗುವ 'ಪತ್ರಗಳು' ಮರೆತುಹೋದ ಒಂದು ಸೋದರ ಸಂಬಂಧದಂತೆ ಭಾಸವಾಗುತ್ತವೆ.
-ರಾಜೇಂದ್ರ ಪ್ರಸಾದ್












